Wednesday, May 26, 2010

Vishnu sahasranama-Peetike

ವೈಶಂಪಾಯನ ಉವಾಚ
ಶ್ರುತ್ವಾ ಧರ್ಮಾನಶೇಷೇಣ ಪಾವನಾನಿ ಚ ಸರ್ವಶಃ |
ಯುಧಿಷ್ಠಿರಃ ಶಾಂತನವಂ ಪುನರೇವಾಭ್ಯಭ್ಯಾಷತ || 1 ||
ವೈಶಂಪಾಯನು ನುಡಿದನು:
ಪಾಪಗಳನ್ನು ಕಳೆದು ಪರಿಶುದ್ಧವಾಗುವ ಎಲ್ಲಾ ಧರ್ಮಗಳ ಬಗ್ಗೆ  ಸಮಗ್ರವಾಗಿ ಭೀಷ್ಮಾಚಾರ್ಯರಿಂದ ಕೇಳಿ ತಿಳಿದ ನಂತರ, ಯುಧಿಷ್ಠಿರ ಭೀಷ್ಮಾಚಾರ್ಯರಲ್ಲಿ ಈ ರೀತಿ ಪ್ರಶ್ನೆ ಹಾಕುತ್ತಾನೆ.  
ಯುಧಿಷ್ಠಿರ:
ಕಿಮೇಕಂ ದೈವತಂ ಲೋಕೇ ಕಿಂ ವಾಪ್ಯೇಕಂ ಪರಾಯಣಂ |
ಸ್ತುವಂತಃ ಕಂ ಕಮರ್ಚಂತಃ ಪ್ರಾಪ್ನುಯುರ್ಮಾನವಾಃ ಶುಭಮ್ || 2 ||
ಕೋ ಧರ್ಮಃ ಸರ್ವಧರ್ಮಾಣಾಂ ಭವತಃ ಪರಮೋ ಮತಃ |
ಕಿಂ ಜಪನ್ಮುಚ್ಯತೇ ಜಂತುರ್ಜನ್ಮಸಂಸಾರಬಂಧನಾತ್ || 3 ||

ಎಲ್ಲ ಶಾಸ್ತ್ರಗಳು ಸಾರುವ ಹಿರಿಯ ದೇವತೆ ಯಾರು? ಒಬ್ಬನೇ ಒಬ್ಬ ಕೊನೆಯ ಆಸರೆ ಯಾರುಯಾರನ್ನು ಹಾಡಿ ಹೊಗಳುತ್ತ, ಆರಾಧಿಸುವುದರಿಂದ  ಮಾನವನಿಗೆ ಒಳಿತು ?  
ಯಾವುದು ಎಲ್ಲ ಧರ್ಮಗಳಿಗೂ ಮಿಗಿಲಾದ ಧರ್ಮ ಎಂದು ನಿಮ್ಮ ಅಭಿಮತ ? ಯಾವುದನ್ನು ಜಪಿಸುವುದರಿಂದ  ಮಾನವ ಹುಟ್ಟಿನಿಂದ ಹಾಗು ಸಂಸಾರ ಬಂಧದಿಂದ  ಮುಕ್ತಿ ಪಡೆಯುತ್ತಾನೆ
ಭೀಷ್ಮ:
ಜಗತ್ಪ್ರಭುಂ ದೇವದೇವಮನಂತಂ ಪುರುಷೋತ್ತಮಮ್ |
ಸ್ತುವನ್ನಾಮಸಹಸ್ರೇಣ ಪುರುಷಃ ಸತತೋತ್ಥಿತಃ || 4 ||
ತಮೇವ ಚಾರ್ಚಯನ್ನಿತ್ಯಂ ಭಕ್ತ್ಯಾ ಪುರುಷಮವ್ಯಯಮ್ |
ಧ್ಯಾಯನ್ ಸ್ತುವನ್ನಮಸ್ಯಂಶ್ಚ ಯಜಮಾನಸ್ತಮೇವ ಚ || 5 ||
ಅನಾದಿ ನಿಧನಂ ವಿಷ್ಣುಂ ಸರ್ವಲೋಕಮಹೇಶ್ವರಮ್ |
ಲೋಕಾಧ್ಯಕ್ಷಂ ಸ್ತುವನ್ನಿತ್ಯಂ ಸರ್ವದುಃಖಾತಿಗೋ ಭವೇತ್ || 6 ||
ಬ್ರಹ್ಮಣ್ಯಂ ಸರ್ವಧರ್ಮಜ್ಞಂ ಲೋಕಾನಾಂ ಕೀರ್ತಿವರ್ಧನಮ್ |
ಲೋಕನಾಥಂ ಮಹದ್ಭೂತಂ ಸರ್ವಭೂತಭವೋಧ್ಭವಮ್ || 7 ||

ಎಂದೂ ಎಡವದೇ ಎಚ್ಚರದಿಂದಿರುವ ಸಾಧಕ, ಜಗದ ಒಡೆಯನನ್ನು, ದೇವತೆಗಳಿಗೂ ಹಿರಿಯನಾದ ಹಿರಿದೈವವನ್ನು, ಆತನ ಸಾವಿರನಾಮಗಳಿಂದ ಸ್ತುತಿಸುತ್ತಾ; ಅಳಿವಿರದ ಆ ಪರಮಪುರುಷನನ್ನೇ ಅನುಗಾಲ ಭಕ್ತಿಯಿಂದ ಪೂಜಿಸುತ್ತ; ಅವನನ್ನೇ ಮನದಲ್ಲಿ ನೆನೆಯುತ್ತ, ಸದಾ ಸ್ತುತಿಸುತ್ತತಲೆಬಾಗಿ ಆರಾಧಿಸುತ್ತಾ;
ತುದಿ-ಮೊದಲು ಇರದವನನ್ನು, ಎಲ್ಲೆಡೆ ತುಂಬಿರುವವನನ್ನು. ಎಲ್ಲ ಲೋಕಗಳ ಹಿರಿಯ ಒಡೆಯರಿಗೂ ಒಡೆಯನಾದವನನ್ನು, ಮೇಲೆ ನಿಂತು ಎಲ್ಲವನ್ನು ಕಾಣುತ್ತಿರುವವನನ್ನು;
ತಿಳಿದವರು ಮೆಚ್ಚುವವನನ್ನು, ಎಲ್ಲ ಧರ್ಮಗಳ ಬಲ್ಲವನನ್ನು, ಜೀವಗಳಿಗೆ ಜಸದ ಏರು ತೋರುವವನನ್ನು; ಜೀವ ಜಾತದ ಒಡೆಯನನ್ನು, ಎಲ್ಲ ಜೀವಗಳಿಗೂ  ಬಾಳನಿತ್ತವನನ್ನು, ಹಿರಿಯ ತತ್ವವಾದ ನಾರಾಯಣನನ್ನು ಆರಾಧಿಸಬೇಕು.    
 
ಏಷ ಮೇ ಸರ್ವಧರ್ಮಾಣಾಂ ಧರ್ಮೋಧಿಕತಮೋ ಮತಃ
ಯದ್ಭಕ್ತ್ಯಾ ಪುಂಡರೀಕಾಕ್ಷಂ ಸ್ತವೈರರ್ಚೇನ್ನರಃ ಸದಾ || 8 ||

ಭಗವಂತನನ್ನು ಅವನ ಗುಣದ ಅನುಸಂಧಾನದ ಮೂಲಕ ಸ್ತುತಿಸುವುದೇ ಧರ್ಮದಲ್ಲಿ ಶ್ರೇಷ್ಠವಾದ ಧರ್ಮ. ಸ್ತೋತ್ರಗಳಲ್ಲಿ  ಶ್ರೇಷ್ಠವಾದ ಸ್ತೋತ್ರ ವಿಷ್ಣು ಸಹಸ್ರನಾಮ. ಭಗವಂತನ ಸ್ತೋತ್ರವನ್ನು ಶ್ರದ್ಧೆ-ಭಕ್ತಿಯಿಂದ, ವಿಶ್ವಾಸ-ನಂಬಿಕೆಯಿಂದ ಸ್ತುತಿಸುವುದು ಎಲ್ಲಾ ಧರ್ಮಗಳಿಗಿಂತ ಮಹತ್ತಾದ ಧರ್ಮ. ನಮ್ಮ ನಂಬಿಕೆ ಎಂತದ್ದೋ, ನಮ್ಮ ವ್ಯಕ್ತಿತ್ವ ಎಂತದ್ದೋ, ನಾವು ಪಡೆಯುವ ಫಲ ಅಂತದ್ದು. ನಂಬಿಕೆಯನ್ನು ಬೆಳೆಸಿಕೊಳ್ಳದಿದ್ದರೆ ಉಪಯೋಗವಿಲ್ಲ. ತಿಳಿಯದೇ ನಂಬದೇ ಪೂಜಿಸಿ ಉಪಯೋಗವಿಲ್ಲ. ಗೌರವಪೂರ್ವಕವಾಗಿ, ನಂಬಿಕೆಯಿಂದ, ಸ್ತೋತ್ರಗಳಿಂದ ಹಾಡಿ ಕೊಂಡಾಡಿ ಪೂಜಿಸುವುದು ಶ್ರೇಷ್ಠವಾದ ಧರ್ಮ.    
ಪರಮಂ ಯೋ ಮಹತ್ತೇಜಃ ಪರಮಂ ಯೋ ಮಹತ್ತಪಃ |
ಪರಮಂ ಯೋ ಮಹದ್ಬ್ರಹ್ಮ ಪರಮಂ ಯಃ ಪರಾಯಣಮ್ || 9 ||

ಭಗವಂತ ಬೆಳಕುಗಳಿಗೆ ಬೆಳಕು ನೀಡುವ ಸ್ವರೂಪ, ಎಲ್ಲರ ಚಿಂತನೆಯ ಕೊನೆಯ ಗುರಿ, ಎಲ್ಲ ಜ್ಞಾನದ ಗಮ್ಯ ಆ ಭಗವಂತ.  ಇಲ್ಲಿ ಭಗವಂತನನ್ನು  'ಪರಮ ಮಹಾ ಬ್ರಹ್ಮ' ಎನ್ನುತ್ತಾರೆ. ಇಲ್ಲಿ ಬ್ರಹ್ಮ ಎಂದರೆ ಜೀವರು; ಪರಬ್ರಹ್ಮ ಎಂದರೆ ಮುಕ್ತರಾದ ಜೀವರು; ಪರಮಬ್ರಹ್ಮ ಎಂದರೆ ಶ್ರೀತತ್ವ, ನಿತ್ಯ ಮುಕ್ತಳಾದ ಶ್ರೀಲಕ್ಷ್ಮಿ. ಪರಮ ಮಹಾ ಬ್ರಹ್ಮ ಎಂದರೆ ನಾರಾಯಣ. ಭಗವಂತ ಪರಾಯಣರಿಗೂ ಕೂಡಾ ಪರಮ. ಇಲ್ಲಿ ಪರಾಯಣರು ಎಂದರೆ ನಮಗೆ ಆಸರೆಯಾಗಿರುವ ತತ್ವಾಭಿಮಾನಿ ದೇವತೆಗಳು.  ಭಗವಂತ ಸರ್ವ ದೇವತೆಗಳ ಒಡೆಯ.  

ಪವಿತ್ರಾಣಾಂ ಪವಿತ್ರಂ ಯೋ ಮಂಗಲಾನಾಂ ಚ ಮಂಗಲಮ್ |
ದೈವತಂ ದೇವತಾನಾಂ ಚ ಭೂತಾನಾಂ ಯೋವ್ಯಯಃ ಪಿತಾ || 10 ||

ಪವಿತ್ರ ಎಂದರೆ ಪಾವನಗೊಳಿಸುವಂತದ್ದು. ನಾವು ನಿರ್ಮಲವಾಗಬೇಕಾದರೆ, ಆ ಪರಮ ಪವಿತ್ರನಾದ ಭಗವಂತನಲ್ಲಿ ಶರಣಾಗಬೇಕು. ಆತ ಪಾವನಗಳಿಗೆ ಪಾವನನಾದವನು; ಒಳಿತುಗಳಿಗೆ ಒಳಿತಾದವನು; ದೇವತೆಗಳಿಗೂ ಹಿರಿ ದೈವಜೀವರಿಗೆ ಅಳಿವಿರದ ಅಪ್ಪ.  
ಯತಃ ಸರ್ವಾಣಿ ಭೂತಾನಿ ಭವಂತ್ಯಾದಿಯುಗಾಗಮೇ |
ಯಸ್ಮಿಂಶ್ಚ ಪ್ರಲಯಂ ಯಾಂತಿ ಪುನರೇವ ಯುಗಕ್ಷಯೇ || 11 ||

ಸೃಷ್ಟಿ ಕಾಲದಲ್ಲಿ ಭಗವಂತನಿಂದ ಈ ಕಾಣುವ ಸೃಷ್ಟಿ ನಿರ್ಮಾಣವಾಗುತ್ತದೆ. ಎಲ್ಲ ಜೀವಗಳು ಹುಟ್ಟಿ ಬರುತ್ತವೆ, ಪ್ರಳಯಕಾಲದಲ್ಲಿ ಕಾಣುವ ರೂಪ ಕಳೆದುಕೊಂಡು ಸೂಕ್ಷ್ಮ ರೂಪದಲ್ಲಿ ಆ ಭಗವಂತನನ್ನು ಹೋಗಿ ಸೇರುತ್ತವೆ. ಪ್ರತಿಯೊಂದು ಕ್ರಿಯೆ  ವ್ಯವಸ್ಥಿತವಾಗಿ, ಗಣಿತಬದ್ಧವಾಗಿ ನಡೆಯುತ್ತದೆ. ಇಲ್ಲಿ ಯಾವುದೂ ಆಕಸ್ಮಿಕವಲ್ಲ.  
 
ತಸ್ಯ ಲೋಕಪ್ರಧಾನಸ್ಯ ಜಗನ್ನಾಥಸ್ಯ ಭೂಪತೇ |
ವಿಷ್ಣೋರ್ನಾಮಸಹಸ್ರಂ ಮೇ ಶ್ರುಣು ಪಾಪಭಯಾಪಹಮ್ || 12 ||

ಭಗವಂತ ನಮ್ಮ ಪಾಪ ಭಯವನ್ನು ತೊಡೆದು ಹಾಕುತ್ತಾನೆ. ತಪ್ಪು ಮಾಡಿದಾಗ ತಿದ್ದಿ ಉದ್ಧಾರ ಮಾಡುತ್ತಾನೆ.  "ಓ ಭೂಪತಿ , ಎಲ್ಲ ಶಾಸ್ತ್ರಗಳ ಮುಖ್ಯ ವಾಚ್ಯನಾದ ಜಗದೊಡೆಯನಾದ ಇಂತಹ ವಿಷ್ಣುವಿನ, ಸಾವಿರ ನಾಮಗಳನ್ನು ಆಲಿಸು".    

ಯಾನಿ ನಾಮಾನಿ ಗೌಣಾನಿ ವಿಖ್ಯಾತಾನಿ ಮಹಾತ್ಮನಃ |
ಋಷಿಭಿಃ ಪರಿಗೀತಾನಿ ತಾನಿ ವಕ್ಷ್ಯಾಮಿ ಭೂತಯೇ || 13 ||

"ಪ್ರಾಚೀನ ಋಷಿ-ಮುನಿಗಳು, ಮಹಾತ್ಮರು, ನಿರಂತರ ಉಪಾಸನೆ ಮಾಡಿಕೊಂಡು ಬಂದಿರುವ ಆ  ಪರಮಾತ್ಮನ ಗುಣವನ್ನು ಸಾರುವ, ಹೆಸರಾಂತ  ಸಾವಿರ ನಾಮಗಳನ್ನು ಹೇಳುತ್ತೇನೆ" ಎಂದು ಭೀಷ್ಮಾಚಾರ್ಯರು ವಿಷ್ಣು ಸಹಸ್ರನಾಮವನ್ನು, ಶ್ರೀಕೃಷ್ಣನ ಸಮ್ಮುಖದಲ್ಲಿ ಧರ್ಮರಾಯನಿಗೆ ಉಪದೇಶ ಮಾಡುತ್ತಾರೆ.
ಭಗವಂತನ ನಾಮವನ್ನು ಸ್ತ್ರೀ-ಪುರುಷ-ನಪುಂಸಕ ಲಿಂಗಗಳಲ್ಲಿ ಕಾಣಬಹುದು. ಸ್ತ್ರೀ-ಪುರುಷರಲ್ಲಿರುವ ಸರ್ವ ಗುಣಗಳಿಂದ ಪೂರ್ಣನಾದ ಭಗವಂತನಲ್ಲಿ ಯಾವುದೇ ರೀತಿಯ ಸ್ತ್ರೀ-ಪುರುಷ ಗುಣದೋಷಗಳಿಲ್ಲ. ಈ ರೀತಿ ಲಿಂಗ ಸಮನ್ವಯ ಭಗವಂತನಲ್ಲಿ ಮಾತ್ರ ಸಾಧ್ಯ.
ಸಾಮಾನ್ಯವಾಗಿ  ಯಾವುದೇ ಪೂಜೆ-ಕರ್ಮವನ್ನು ಮಾಡುವಾಗ ವಿಘ್ನನಿವಾರಕನಾದ ಗಣಪತಿ ಪೂಜೆ ಮಾಡುವುದು ಸಂಪ್ರದಾಯ. ಅದಕ್ಕಾಗಿ ಗಣಪತಿ ಮಂಡಲ ಬರೆದು ಪೂಜಿಸಿ ನಂತರ ಇತರ ಕರ್ಮವನ್ನು ಮಾಡುತ್ತಾರೆ.
 ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ
ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ

ಹೀಗೆ ವಿಘ್ನ ನಿವಾರಕ ಗಣಪತಿ ಸ್ತುತಿ ಮೊದಲಿಗೆ. ವಿಷ್ಣು ಸಹಸ್ರನಾಮ ಭಗವಂತನ 'ವಿಶ್ವಮ್' ಎನ್ನುವ ವಿಘ್ನನಿವಾರಕ 'ವಿಶ್ವಂಭರ' ರೂಪದ ನಾಮದಿಂದ ಪ್ರಾರಂಭವಾಗುತ್ತದೆ.
ನಮ್ಮ  ಜೀವನದಲ್ಲಿರುವ ಮೂರು ಅವಸ್ಥೆಗಳಲ್ಲಿ (ಎಚ್ಚರ-ಕನಸು-ನಿದ್ದೆ), ನಮ್ಮ ಎಚ್ಚರವನ್ನು ನಿಯಂತ್ರಿಸುವ ಭಗವಂತನ ರೂಪ 'ವಿಶ್ವ' ನಾಮಕ ರೂಪ.


ಬನ್ನಿ, ವಿಘ್ನನಾಶಕ ವಿಶ್ವಂಭರನಾಗಿ, ನಮಗೆ ಎಚ್ಚರವನ್ನು ಕೊಟ್ಟು, ವಿಷ್ಣುಸಹಸ್ರನಾಮ ಚಿಂತನೆ ಮಾಡುವಂತೆ ಮಾಡು ಎಂದು ಆ ಭಗವಂತನಲ್ಲಿ ಪ್ರಾರ್ಥಿಸಿ, ಆತನ ನಾಮದಲ್ಲಿ ಅವನ ಗುಣದ ಅನುಸಂಧಾನ ಮಾಡೋಣ.   

2 comments:

  1. This comment has been removed by the author.

    ReplyDelete
  2. Hi, I am delighted with your discourse and explanation. It is organized very well, to the point, paints right background, brief & crisp. Right amount of "Vimarshe".
    I am hooked into listening to Sahastranama. I listen in Car. I read some verses everyday to understand meaning, construct of combined words.
    As,I am now interested in understanding deeper meaning and learning the Vishnu Sahastranama, I am a kannadiga and hence your online source is great light for me towards this effort.

    I like to understand which then makes listening sahastranama more delightful and visual (with flashes of images of acts of God and what those represents).

    Towards this, I am very greatful for your articles. You have created this few years back, but I am learning now, so I can vouch, what you have created for posterity is greatly appreciated. I will be providing feedback as I continue to read and read, questions that arise in me. Hope you could answer.

    For now, I have these questions.
    In this section of Peetike,
    a) I find that Verses finish at 13. I find there is 14, 15 and 16. I did not find explanation. Could you please add. b) Like in your Bhagavad Gita discourse, can you please create breaks of combined words (i.e. words before Sandhi). This improves understanding and recognize those combined word, and visually picture your explanation. Besides, it improves my reading of mantras in sanskrit better and better.

    ReplyDelete