Tuesday, June 29, 2010

Vishnu Sahasranama 119


ಅಮೃತಃ

119 ) ಅಮೃತಃ
ಅಮೃತಃ ಅಂದಾಗ ನಮಗೆ ತಕ್ಷಣ ಹೊಳೆಯುವುದು 'ಎಂದೆಂದೂ ಸಾವಿಲ್ಲದವರು' ಎನ್ನುವ ಅರ್ಥ. ಸಾಮಾನ್ಯವಾಗಿ ಸಂಸ್ಕೃತದಲ್ಲಿ ಮನುಷ್ಯರನ್ನು ಮರ್ತ್ಯರು ಎಂದು ಕರೆಯುತ್ತಾರೆ. ಅಂದರೆ ಒಂದು ದಿನ ಸಾಯುವವನು ಎಂದರ್ಥ !!! ಈ ಸಾವಿನಲ್ಲಿ ನಾಲ್ಕು ವಿಧ.
೧. ಸ್ವರೂಪ ನಾಶ. ಅಂದರೆ ಮಣ್ಣಿನಿಂದ ಮಾಡಿದ ಮಡಿಕೆ ಕೈಜಾರಿ ಬಿದ್ದಾಗ ಅದರ ಸ್ವರೂಪವಾದ ಆಕಾರ ನಾಶವಾಗುತ್ತದೆ.
೨. ದೇಹ ನಾಶ. ಅಂದರೆ ನಮ್ಮ ದೇಹದಿಂದ ಪ್ರಾಣ ಪಕ್ಷಿ ಹಾರಿ ಹೋದಮೇಲೆ ನಮ್ಮ ದೇಹ ನಾಶವಾಗುತ್ತದೆ.
೩. ದುಃಖ ಪ್ರಾಪ್ತಿ ಕೂಡ ಒಂದು ರೀತಿಯ ಸಾವು.
೪. ಅಪೂರ್ಣತೆ (Imperfection is death)
ಆದರೆ ಭಗವಂತ ಈ ನಾಲ್ಕು ರೀತಿಯ ನಾಶವಿಲ್ಲದ ನಿತ್ಯ ಸ್ವರೂಪ. ಆದ್ದರಿಂದ ಆತ ಅಮೃತ.ಉಪನಿಷತ್ತುಗಳು ಹೇಳುವಂತೆ ಭಗವಂತನಿಗೆ ಮೂರು ಸ್ಥಾನಗಳಿವೆ. ಅಮೃತ, ಕ್ಷೇಮ ಹಾಗು ಅಭಯ. ಇಂತಹ ಅಮೃತ ಸ್ಥಾನದಲ್ಲಿರುವ ಭಗವಂತ ಅಮೃತಃ. ಇನ್ನು ದೇವತೆಗಳ ಆಯಸ್ಸು ಅತೀ ದೀರ್ಘ, ಹಾಗು ವಾಯುದೇವರ ಮತ್ತು ಚತುರ್ಮುಖನ ಆಯಸ್ಸು ಕೂಡ ಮತ್ತೂ ದೀರ್ಘ. ಈ ರೀತಿ ಪ್ರಾಣದೇವರಿಗೆ, ಚತುರ್ಮುಖನಿಗೆ, ದೇವತೆಗಳಿಗೆ, ಮುಕ್ತಿ ಪಡೆದ ಜೀವರಿಗೆ, ಅಮರತ್ವವನ್ನು ಕರುಣಿಸಿದ, ಲಕ್ಷ್ಮೀ ಪತಿ ಭಗವಂತ ಅಮೃತಃ.

No comments:

Post a Comment