Thursday, June 3, 2010

Vishnu Sahasranamam 22

ಶ್ರೀಮಾನ್

22)ಶ್ರೀಮಾನ್
-ಭಗವಂತ ಶ್ರೀಮಂತ ! ; ೧> ಇಡೀ ವಿಶ್ವದ ಒಡೆತನ ಇರುವವನು ಅದ್ದರಿಂದ ಆತ ಶ್ರೀಮಾನ್.
-ಶ್ರೀಹಿ ಅಂದರೆ ವೇದ ವಾಙ್ಮಯ; ೨> ಶ್ರೀಮಾನ್ ಅಂದರೆ ಸಮಸ್ತ ವೇದದಿಂದ ಪ್ರತಿಪಾದ್ಯನಾದವನು.
-ಶ್ರೀ ಅಂದರೆ "ಲಕ್ಷ್ಮಿ" - ೩> ಶ್ರೀಮಾನ್ ಅಂದರೆ ಲಕ್ಷ್ಮೀಪತಿಯದ ಭಗವಂತ.
-ಐತರೇಯ ಉಪನಿಷದ್ ನಲ್ಲಿ ಹೇಳುವಂತೆ "ಕಣ್ಣು ಒಂದು ಶ್ರೀ , ಮನಸ್ಸು ಒಂದು ಶ್ರೀ , ಕಿವಿ ಒಂದು ಶ್ರೀ, ಮಾತು ಒಂದು ಶ್ರೀ ಮತ್ತು ಉಸಿರು ಒಂದು ಶ್ರೀ " ಏಕೆಂದರೆ ಈ ಪಂಚೇಂದ್ರಿಯಗಳು ಶಿರಸ್ಸನ್ನು ಆಶ್ರಯಿಸಿಕೊಂಡಿರುವ ಇಂದ್ರಿಯಗಳು ಅದ್ದರಿಂದ "ಶ್ರೀ" .
ಮನುಷ್ಯ ಅರಿವಿನ ಸಂಪತ್ತನ್ನು ಗಳಿಸುವುದೇ ಕಣ್ಣು- ಕಿವಿಯಿಂದ ; ಕಣ್ಣು-ಕಿವಿ ದೇಹದ ಸೂರ್ಯ-ಚಂದ್ರ ಇದ್ದಂತೆ. ಅಗ್ನಿ ಸ್ವರೂಪವಾಗಿರುವ ಬಾಯಿ (ಮಾತು)- ಮನುಷ್ಯನಿಗೆ ಭಗವಂತ ಕೊಟ್ಟಿರುವ ಅಪೂರ್ವವಾದ ಸಂಪತ್ತು. ಮಾತು ಹೊರಡಬೇಕಿದ್ದರೆ, ನೋಡಿದ್ದನ್ನ ಅನುಭವಿಸಲಿಕ್ಕೆ , ಕೇಳಿದ್ದನ್ನ ಗ್ರಹಿಸಲು ಅತ್ಯಂತ ಮುಖ್ಯವಾಗಿ ಮನಸ್ಸು ಬೇಕು. ಈ ಎಲ್ಲಾ ಇಂದ್ರಿಯಗಳನ್ನೂ ಚಾಲನೆಯಲ್ಲಿಡಲು ಪ್ರಾಣಶಕ್ತಿ ಬೇಕು. ಅದ್ದರಿಂದ ಈ ಪಂಚೇಂದ್ರಿಯಗಳು ಮನುಷ್ಯನಲ್ಲಿರುವ ಅತ್ಯಂತ ಶ್ರೀಮಂತ ಅಂಗ .೪> ಶ್ರೀಮಾನ್ ಅಂದರೆ -ಈ ಪಂಚೇಂದ್ರಿಯಗಳನ್ನು ನಮಗೆ ದಯಪಾಲಿಸಿದ ಹಾಗು, ಪಂಚೇಂದ್ರಿಯಗಳ ಒಡೆಯನಾದ, ಲಕ್ಷ್ಮೀಪತಿಯದ ಆ ಕರುಣಾಮಯೀ ಭಗವಂತ.

No comments:

Post a Comment