Saturday, June 19, 2010

Vishnu Sahasranama 70-73

ಹಿರಣ್ಯಗರ್ಭೋ ಭೂಗರ್ಭೋ ಮಾಧವೋ ಮಧುಸೂದನಃ

70)ಹಿರಣ್ಯಗರ್ಭೋ
ಇಲ್ಲಿ ಹಿರಣ್ಯ ಅಂದರೆ ಚಿನ್ನ ಅಥವಾ ಬಂಗಾರ ಎನ್ನುವ ಅರ್ಥವನ್ನು ಕೊಡುತ್ತದೆ .
ಈ ಹಿಂದೆ ಬ್ರಹ್ಮಾಂಡವನ್ನು ಕಮಲ ರೂಪದ ಬ್ರಹ್ಮನ ಮೊಟ್ಟೆ ಎಂದು ವರ್ಣಿಸಿರುವುದನ್ನು ನೋಡಿದ್ದೇವೆ. ಈ ಬ್ರಹ್ಮಾಂಡ ಭಗವಂತನ ಉದರದಿಂದ ನಿರ್ಮಾಣವಾಯಿತು ಎನ್ನುವುದನ್ನು "ನಾಭಿ-ಕಮಲ" ರೂಪದಲ್ಲಿ ಕಲ್ಪಿಸಲಾಗಿದೆ.
ಕವಿಯ ಕಲ್ಪನೆಯಂತೆ, ಈ ಬ್ರಹ್ಮಾಂಡವನ್ನು ದೂರದಲ್ಲಿ ನಿಂತು ನೋಡಿದರೆ - ನೂರು ಸೂರ್ಯರು ಒಮ್ಮೆಲೇ ಉದಯಿಸಿದರೆ ಹೇಗೆ ಕಾಣಬಹುದೋ ಹಾಗೆ ಚಿನ್ನದ ಮೊಟ್ಟೆಯಂತೆ ಕಾಣಬಹುದು.
ಇಂತಹ ಅಪೂರ್ವವಾದ ಸೃಷ್ಟಿಯನ್ನು ತನ್ನ ಉದರಲ್ಲಿ ದರಿಸಿರುವವನು ಹಿರಣ್ಯಗರ್ಭ.
71)ಭೂಗರ್ಭೋ
ಇಲ್ಲಿ ಭೂ ಅಂದರೆ ಪ್ರಕೃತಿ ಹಾಗು ಭೂಮಿ ಎನ್ನುವ ಅರ್ಥವನ್ನು ಕೊಡುತ್ತದೆ.
ಈ ಪ್ರಕೃತಿಯನ್ನು ಹಾಗು ಅದರ ಒಂದು ಭಾಗವಾದ ಭೂಮಿಯನ್ನು ತನ್ನ ಒಡಲಲ್ಲಿ ಹೊತ್ತವನು ಭೂಗರ್ಭ. ಭೂಮಿಯ ಗುರುತ್ವಾಕರ್ಷಣ ಶಕ್ತಿಯನ್ನು ಸಂಕರ್ಷಣ ಶಕ್ತಿ ಎನ್ನುತ್ತಾರೆ. ಸಂಕರ್ಷಣ ಆದಿಶೇಷನ ಅನ್ವರ್ಥ ನಾಮ. ಭಗವಂತನ ಸೇವಕನಾದ ಸಂಕರ್ಷಣ ಈ ಭೂಮಿಯನ್ನು ನಿಯಮಬದ್ದವಾಗಿ ಹಿಡಿದಿಟ್ಟು ಕಾಪಾಡುತ್ತಿದ್ದಾನೆ ಆದ್ದರಿಂದ ಈ ಭೂಮಿಯ ಸೃಷ್ಟಿಕರ್ತ ಹಾಗು ಸಂರಕ್ಷಕನಾದ ಭಗವಂತ ಭೂಗರ್ಭ.
72)ಮಾಧವೋ
'ಮಾ' ಅಂದರೆ ಮಾತೆ ಲಕ್ಷ್ಮಿ, ಆದ್ದರಿಂದ ಮಾಧವ ಅಂದರೆ ಲಕ್ಷ್ಮೀಪತಿ ಭಗವಂತ.
ಇನ್ನು 'ಮಾ' ಅಂದರೆ ಜ್ಞಾನ ಕೂಡ ಹೌದು. ಭಗವಂತ ಜ್ಞಾನದ ಒಡೆಯ ಅದ್ದರಿಂದ ಆತ ಮಾದವ.
ಶ್ರೀಕೃಷ್ಣ ಅವತಾರದಲ್ಲಿ ಭಗವಂತ ಮದುವಂಶದಲ್ಲಿ ಹುಟ್ಟಿ ಬಂದದ್ದರಿಂದ ಆತನನ್ನು ಮಾದವ ಎಂದೂ ಕರೆಯುತ್ತಾರೆ.
ವೇದದಲ್ಲಿ ಮಾತೃ ಎನ್ನುವ ಪದವನ್ನು ಮಾತು ಅಥವಾ ವಾಗ್ಮಯ ಎನ್ನುವ ಅರ್ಥದಲ್ಲಿ ಉಪಯೋಗಿಸಿದ್ದಾರೆ. ಏಳು ಮಹಾನ್ ಗ್ರಂಥಗಳಾದ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ , ರಾಮಾಯಣ, ಮಹಾಭಾರತ ಹಾಗು ಪುರಾಣಗಳನ್ನು ಮಾತೃ ಎನ್ನುತ್ತಾರೆ.
ಅದ್ದರಿಂದ ಸಮಸ್ತ ವೈದಿಕ ವಾಗ್ಮಯ ಪ್ರತಿಪಾದನಾದ ಭಗವಂತ ಮಾದವ.
73)ಮಧುಸೂದನಃ
ಮಧು ಅಂದರೆ ಕಾಮ(Sex), ಬಯಕೆ(Desire), ಆನಂದ(Ultimate bliss) ಎನ್ನುವ ಅನೇಕ ಅರ್ಥವನ್ನು ಕೊಡುತ್ತದೆ.

ಕಾಮ(ಮಧು)ವೇ ಕ್ರೋದ(ಕೈತಪ)ಕ್ಕೆ ಕಾರಣ. ಈ ಮದು-ಕೈತಪರು ನಮ್ಮೊಳಗಿದ್ದು ನಮ್ಮೆಲ್ಲ ಕಷ್ಟ-ಕಾರ್ಪಣ್ಯಕ್ಕೆ ಮೂಲ ಕಾರಣಕರ್ತರಾಗಿದ್ದರೆ. ಈ ಮಧು-ಕೈತಪರಿಂದ ನಮಗೆ ಮುಕ್ತಿ ದೊರೆಯಬೇಕಿದ್ದರೆ ನಾವು ಭಗವಂತನ ಮೊರೆ ಹೋಗಬೇಕು. ಆತನೊಬ್ಬನೇ ಈ ಮಧುವನ್ನು ಸೂದಿಸಬಲ್ಲ (ನಾಶಮಾಡಬಲ್ಲ) . ಆದ್ದರಿಂದ ಭಗವಂತ ಮಧುಸೂದನ.
ಇನ್ನು ಮಧು ಅಂದರೆ ಆನಂದ ಎನ್ನುವ ಅರ್ಥವನ್ನು ವಿಶ್ಲೇಷಿಸಿದಾಗ- ಮಧುಸೂದನ ಎಂದರೆ ಆನಂದ ನಾಶಕ ಎಂದಾಗುತ್ತದೆ!!!! ಇದೇನಿದು -ಆನಂದ ಸ್ವರೂಪನಾದ ಭಗವಂತ ಆನಂದ ನಾಶಕ ಅನ್ನುತ್ತಾರಲ್ಲಪ್ಪಾ ಎಂದು ಗಾಬರಿಯಾಗಬೇಡಿ! ಆತ- ಧರ್ಮ ಮಾರ್ಗವನ್ನು ಬಿಟ್ಟು, ಅದರ್ಮಿಯಾಗಿ, ಮದ(ಆಹಂಕಾರ)ದಿಂದ ಸಾಗುವವರ ಆನಂದವನ್ನು ನಾಶ ಮಾಡಿ, ಸಜ್ಜನರ ಉದ್ದಾರ ಮಾಡುವ ಆನಂದರೂಪಿ ಭಗವಂತ. ಆದ್ದರಿಂದ ಆತ ಮಧುಸೂದನ.

1 comment: