Thursday, June 17, 2010

Vishnu Sahasranama 61

ತ್ರಿಕಕುಬ್ದಾಮ

61) ತ್ರಿಕಕುಬ್ದಾಮ (ಪ್ರಭೂತಸ್ತ್ರಿಕಕುಬ್ಧಾಮ)
ತ್ರಿ+ ಕಕುತ್+ ಧಾಮ
ತ್ರಿ ಅಂದರೆ ಮೂರು,
ಕಕುತ್ ಅಂದರೆ ಶಿಕೆ ಅಥವಾ ತುತ್ತ-ತುದಿ,
ಧಾಮ ಅಂದರೆ ನೆಲೆಸಿರುವವನು.
ತ್ರಿಕಕುಬ್ದಾಮ ಅಂದರೆ ಮೂರು ಶಿಕೆಗಳಲ್ಲಿ ನೆಲೆಸಿರುವವನು.
ಈಗ ನಾವು ಮೂರು ಶಿಕೆಗಳು ಯಾವುದೆಂದು ನೋಡೋಣ.
ಮೂರು ಲೋಕಗಳು - ಭೂಮಿ , ಅಂತರಿಕ್ಷ ಮತ್ತು ಸ್ವರ್ಗ.
ಈ ಮೂರು ಲೋಕಗಳ ತುದಿಯಲ್ಲಿ ಮೂರು ಸ್ಥಾನಗಳು- ಭೂಮಿಯಲ್ಲಿ-ಶ್ವೇತದ್ವೀಪ, ಅಂತರಿಕ್ಷದಲ್ಲಿ-ಅನಂತಾಸನ, ಸ್ವರ್ಗದಲ್ಲಿ-ವೈಕುಂಠ.
ಮೂರು ತೇಜೋಮಯ ಮೂರ್ತಿಗಳು-ಬ್ರಹ್ಮ, ವಿಷ್ಣು, ಮಹೇಶ್ವರ.
ಮೂರು ಅಕ್ಷರಗಳು -ಅ, ಉ, ಮ್ (ಓಂಕಾರ ಪ್ರತಿಪಾದ್ಯ) .
ಈ ಮೇಲಿನ ಮೂರು ಅಕ್ಷರದಿಂದಾದ ಮೂರು ಪದಗಳು ಭೂ: , ಭುವ: ಸ್ವ: (ಭೂರ್ಭುವ: ಸ್ವ: )

ಈ ಪದಗಳಿಂದಾದ ಮೂರು ಪಾದಗಳು- ತತ್ಸರ್ವಿತುರ್ವರೇಣ್ಯಂ, ಭರ್ಗೋದೇವಸ್ಯ ಧೀಮಹಿ, ಧಿಯೋ ಯೋನ: ಪ್ರಚೋದಯಾತ್.
ಮೇಲಿನ ಮೂರು ಪಾದಗಳಿಂದಾದ ಮೂರು ವರ್ಗ (ಸೂಕ್ತಗಳಲ್ಲಿ ಶ್ರೇಷ್ಟವಾದ ಪುರುಷ ಸೂಕ್ತದಲ್ಲಿ ಮೂರು ವರ್ಗಗಳಿವೆ. ಒಂದರಿಂದ-ಐದು ಮೊದಲ ವರ್ಗ, ಆರರಿಂದ-ಹತ್ತು ಎರಡನೇ ವರ್ಗ, ಹನ್ನೊಂದರಿಂದ-ಹದಿನಾರು ಮೂರನೇ ವರ್ಗ)
ಸೂಕ್ತಗಳಿಂದಾದ ಅತ್ತ್ಯಂತ ಶ್ರೇಷ್ಟವಾದ ಮೂರು ವೇದಗಳು ಋಗ್ವೇದ, ಯಜುರ್ವೇದ ಸಾಮವೇದ,
ಅದ್ದರಿಂದ ತ್ರಿಕಕುಬ್ದಾಮ ಅಂದರೆ:
-ಮೂರು ಲೋಕದಲ್ಲಿ ನೆಲೆಸಿರುವವನು.
-ಮೂರು ಲೋಕದಲ್ಲಿರುವ ಮೂರು ನಿತ್ಯ ಸ್ಥಾನದಲ್ಲಿ ನೆಲೆಸಿರುವವನು.
ಅಲ್ಲಿ ನೆಲೆಸಿರುವ ಮೂರು ತೇಜೋಮಯ ಮೂರ್ತಿಗಳಲ್ಲಿ ನೆಲೆಸಿರುವವನು. ಮೂರು ಅಕ್ಷರಗಳಿಂದ ಓಂಕಾರ ಪ್ರತಿಪಾದ್ಯನಾದ ಭಗವಂತ.
-ಮೂರು ವ್ಯಾಹುತಿಗಳಿಂದ ವಾಚ್ಯನಾದವನು.
-ಗಾಯತ್ರಿಯ ಮೂರು ಪಾದಗಳಲ್ಲಿ ವಾಚ್ಯನಾದವನು.
-ಪುರುಷ ಸೂಕ್ತದ ಮೂರು ವರ್ಗದಿಂದ ವಾಚ್ಯನಾದವನು.
-ಮೂರು ವೇದದಿಂದ ವಾಚ್ಯನಾದವನು.
ಒಟ್ಟಾರೆ ತ್ರಿಕಕುಬ್ದಾಮ ಅಂದರೆ ಮೂರು ಲೋಕದಲ್ಲಿ, ತ್ರಿಮೂರ್ತಿ ರೂಪನಾಗಿ, ಸಮಸ್ತ ಶಬ್ದ ಭಂಡಾರ ಮತ್ತು ಸಮಸ್ತ ಶಾಸ್ತ್ರದಿಂದ ವಾಚ್ಯನಾದ ಭಗವಂತ.

No comments:

Post a Comment