Showing posts with label Vishnusahasranama Meaning in Kannada. Show all posts
Showing posts with label Vishnusahasranama Meaning in Kannada. Show all posts

Saturday, September 18, 2010

Vishnusahasranama 361-363

ವಿಷ್ಣು ಸಹಸ್ರನಾಮ : ಸರ್ವಲಕ್ಷಣಲಕ್ಷಣ್ಯೋ ಲಕ್ಷ್ಮೀವಾನ್ ಸಮಿತಿಂಜಯಃ
361) ಸರ್ವಲಕ್ಷಣಲಕ್ಷಣ್ಯಃ

ಭಗವಂತನ ರೂಪ ನಮ್ಮ ಕಲ್ಪನೆಗೆ ಮಿಗಿಲು. ಒಂದು ದೇಹದ ಸೌಂದರ್ಯದ ಲಕ್ಷಣಗಳು ಎಂದು ನಾವು ಏನನ್ನೂ ಕಲ್ಪನೆ ಮಾಡಬಹುದೋ ಅದರ ಪರಾಕಾಷ್ಠೆ ಆತನ ರೂಪ. ಜಗತ್ತಿನ ಎಲ್ಲಾ ಬಣ್ಣ ಅವನ ಬಣ್ಣ. ಆತ ವಿಶ್ವವರ್ಣ. ಅಸಾದಾರಣ ಗುಣಗಳಿಂದ ತುಂಬಿದ ಸರ್ವ ಲಕ್ಷಣಗಳ ನೆಲೆಯಾದ, ಸೌಂದರ್ಯದ ಪರಾಕಾಷ್ಠೆಯ ಸ್ವರೂಪ ಹಾಗು ಸರ್ವ ಸೌಂದರ್ಯದ ಸಾರನಾದ ಭಗವಂತ ಸರ್ವಲಕ್ಷಣಲಕ್ಷಣ್ಯಃ.
362) ಲಕ್ಷ್ಮೀವಾನ್
ಭಗವಂತ ಪೃಕೃತಿ ಮಾತೆ ಶ್ರಿಲಕ್ಷ್ಮಿಯನ್ನು ಸದಾ ತನ್ನ ಎದೆಯಲ್ಲಿ ಧರಿಸಿರುತ್ತಾನೆ. ಲಕ್ಷ್ಮಿ ರಹಿತ ನಾರಾಯಣನನ್ನು ನಾವು ಎಂದೂ ನೋಡುವುದಿಲ್ಲ. ಈ ಸೃಷ್ಟಿಯನ್ನು ಭಗವಂತ ಲಕ್ಷ್ಮಿ ಸಮೇತನಾಗಿ ನಿರ್ಮಿಸಿದ. ಇಂತಹ ಭಗವಂತನಿಗೆ ಲಕ್ಷ್ಮೀವಾನ್ ಅನ್ವರ್ಥ ನಾಮ.
363) ಸಮಿತಿಂಜಯಃ
"ಸಮಿತಿ" ಎಂದರೆ ಯುದ್ದ. ಭಗವಂತ ಅಸುರರನ್ನು ಯದ್ದದಲ್ಲಿ ಗೆಲಿದವನು. ನಮ್ಮ ದೈನಂದಿನ ಸಂಸಾರಿಕ ಯುದ್ದದಲ್ಲಿ ನಮಗೆ ಜಯವನ್ನು ತಂದು ಕೊಟ್ಟು ನಮ್ಮನ್ನು ಸಂಸಾರ ಸಾಗರದಿಂದ ಮುಕ್ತ ಮಾಡುವವನು. ನಮ್ಮ ನೋವನ್ನು ನಾಶಮಾಡುವ ಭಗವಂತ ಸಮಿತಿಂಜಯಃ.

Saturday, June 12, 2010

Vishnu Sahasranamam 48-49

ಪದ್ಮನಾಭೋಮರಪ್ರಭುಃ

48)ಪದ್ಮನಾಭ
ತಾವರೆರೂಪದ ಹದಿನಾಲ್ಕು ಲೋಕಗಳುಳ್ಳ ಈ ಬ್ರಹ್ಮಾಂಡ ಯಾರ ನಾಭಿಯಿಂದ ಸೃಷ್ಟಿಯಾಗಿದೆಯೋ , ಅವನು ಪದ್ಮನಾಭ. ಈ ಸೃಷ್ಟಿಯ ಕಾರಣಪುರುಷ.
49)ಅಮರಪ್ರಭುಃ
"ಮರರು" ಅಂದರೆ ಮರಣ ಹೊಂದುವವರು.
"ಅಮರರು" ಅಂದರೆ ಮರಣವಿಲ್ಲದವರು ಎಂದರ್ಥ.
ಮರಣ ಕೇವಲ ಬೌದ್ಧಿಕ ಶರೀರಕ್ಕೆ ಹೊರತು ಸೂಕ್ಷ್ಮ ಶರೀರಕ್ಕಲ್ಲ. ಮುಕ್ತಿ ಪಡೆದ ಎಲ್ಲಾ ಜೀವರು ಅಮರರು.
ಬ್ರಹ್ಮಾದಿ-ದೇವತೆಗಳು ಅಮೃತಪಾನದಿಂದ ಅಮರರೆನಿಸಿದ್ದರೂ ಕೂಡ , ಅವರಿಗೂ ಹಲವು ಕಲ್ಪಗಳ ನಂತರ ಮರಣ-ಮೋಕ್ಷವಿದೆ . ಆದರೆ ಬ್ರಹ್ಮಾದಿ-ದೇವತೆಗಳ ಆಯಸ್ಸು ಧೀರ್ಘವಾದ್ದರಿಂದ ಅವರನ್ನು ಅಮರರು ಎನ್ನುತ್ತಾರೆ.
ಇಲ್ಲಿ ಅಮರಪ್ರಭು ಎಂದರೆ- ಮುಕ್ತಿ ಪಡೆದ ಜೀವ ಹಾಗು ಬ್ರಹ್ಮಾದಿ-ದೇವತೆಗಳ ಒಡೆಯ(ಪ್ರಭು) ಎಂದರ್ಥ.

Saturday, June 5, 2010

Vishnu Sahasranamam 25 to 29


ಸರ್ವಃ ಶರ್ವಃ ಶಿವಃ ಸ್ಥಾಣುರ್ಭೂತಾದಿ

25>ಸರ್ವಃ
ವಿಶ್ವಂ ಮತ್ತು ಸರ್ವ- ಸಮಾನಾರ್ಥಕವಾದ ನಾಮಗಳು .
ಭಗವಂತ ಸರ್ವ ಅಂದರೆ -ಸರ್ವಸಮರ್ಥ ;ಸರ್ವಗತ ; ಸರ್ವಗುಣ ಪೂರ್ಣ.
ಸರ್ವ ಅಂದರೆ ಎಲ್ಲವನ್ನು ತಿಳಿದವನು , ಎಲ್ಲೆಡೆ ತುಂಬಿರುವವನು ,ಎಲ್ಲಾ ಕಾಲದಲ್ಲೂ ಇರುವವನು , ಎಲ್ಲಕ್ಕೂ ಕಾರಣನಾದವನು, ಪರಿಪೂರ್ಣನಾದವನು.
26> ಶರ್ವಃ
ಶರ್ವ ಅಂದರೆ ಸಮಸ್ತ ಜಗತ್ತನ್ನು ಸಂಹಾರ ಮಾಡುವವನು (ಆದ್ದರಿಂದ ಸಂಹಾರ ಶಕ್ತಿ- ಶಿವನನ್ನೂ ಶರ್ವ ಎಂದು ಕರೆಯುತ್ತಾರೆ) .
ಶರ್ವ ಅಂದರೆ ದುರ್ಜನರಿಗೆ, ಪಾಪಿಗಳಿಗೆ ದುಃಖವನ್ನು ಕೊಡುವವನು!
27> ಶಿವಃ
ಶ ಅಂದರೆ ಸುಖ ; ಶಿವ ಅಂದರೆ ಜ್ಞಾನಾನಂದ ಸ್ವರೂಪ, ಪರಮಮಂಗಳ ಸ್ವರೂಪ.
28 >ಸ್ಥಾಣು
ಸ್ಥಾಣು ಅಂದರೆ ಚಲಿಸದ. ಭಗವಂತ ಸರ್ವಗತ ಅದ್ದರಿಂದ ಆತ ಸ್ಥಾಣು.
ಆತ ಚಲಿಸದೆ ಮಲಗಿದ್ದರೂ, ಎಲ್ಲಾ ಕಡೆ ತಲುಪಬಲ್ಲ. ಏಕೆಂದರೆ ಬಿಂಬ ರೂಪವಾಗಿ ಪ್ರತಿಯೊಂದರಲ್ಲೂ ಭಗವಂತ ಇದ್ದಾನೆ. ಆತ ಆಕಾಶಕ್ಕಿಂತ ದೊಡ್ಡವ , ಪರಮಾಣುಗಿಂತ ಚಿಕ್ಕವ! (it moves and it moves not!!! ಚಲಿಸಿದಂತೆ ಕಾಣುವ ಚಲಿಸದೆ ಇರುವ ಸ್ವರೂಪ)
29>ಭೂತಾದಿ
(ಸ್ಥಾಣುರ್ಭೂತಾದಿ)
ಭೂತಾದಿ ಅಂದರೆ ಎಲ್ಲಾ ಭೂತಗಳ ಆದಿ. ಎಲ್ಲಾ ಜೀವಗಳ, ಎಲ್ಲಾ ಜಡಗಳ ಆದಿ.
ಎಲ್ಲಾ ಚರಾಚರಾತ್ಮಕವಾದ, ಚೇತನಾಚೇತನಾತ್ಮಕವಾದ ಪ್ರಪಂಚಕ್ಕೆ ಆದಿ ಕಾರಣನಾದವ ಭೂತದಿ.
ಅಷ್ಟೇ ಅಲ್ಲ ... ಈ ಎಲ್ಲಾ ಭೂತಗಳನ್ನ ತನ್ನಲ್ಲಿರಿಸಿಕೊಂಡು ಪಾಲನೆ ಮಾಡುವವನು,ಕೊನೆಗೆ ಸಂಹಾರ ಮಾಡುವವನು.
ಆದ್ದರಿಂದ ಸಮಸ್ತ ಚರಾಚರಾತ್ಮಕವಾದ, ಚೇತನಾಚೇತನಾತ್ಮಕವಾದ ಪ್ರಪಂಚದ ಸೃಷ್ಟಿ-ಸ್ತಿತಿ- ಸಂಹಾರಕ್ಕೆ ಕಾರಣನಾದವನು ಭೂತಾದಿ.
ಭೂತರು ಅಂದರೆ ಮುಕ್ತರು-ಮುಕ್ತರಿಗೆ ಮುಕ್ತಿಯನ್ನು ಕರುಣಿಸುವವನು ಭೂತಾದಿ.

Thursday, June 3, 2010

Vishnu Sahasranamam 22

ಶ್ರೀಮಾನ್

22)ಶ್ರೀಮಾನ್
-ಭಗವಂತ ಶ್ರೀಮಂತ ! ; ೧> ಇಡೀ ವಿಶ್ವದ ಒಡೆತನ ಇರುವವನು ಅದ್ದರಿಂದ ಆತ ಶ್ರೀಮಾನ್.
-ಶ್ರೀಹಿ ಅಂದರೆ ವೇದ ವಾಙ್ಮಯ; ೨> ಶ್ರೀಮಾನ್ ಅಂದರೆ ಸಮಸ್ತ ವೇದದಿಂದ ಪ್ರತಿಪಾದ್ಯನಾದವನು.
-ಶ್ರೀ ಅಂದರೆ "ಲಕ್ಷ್ಮಿ" - ೩> ಶ್ರೀಮಾನ್ ಅಂದರೆ ಲಕ್ಷ್ಮೀಪತಿಯದ ಭಗವಂತ.
-ಐತರೇಯ ಉಪನಿಷದ್ ನಲ್ಲಿ ಹೇಳುವಂತೆ "ಕಣ್ಣು ಒಂದು ಶ್ರೀ , ಮನಸ್ಸು ಒಂದು ಶ್ರೀ , ಕಿವಿ ಒಂದು ಶ್ರೀ, ಮಾತು ಒಂದು ಶ್ರೀ ಮತ್ತು ಉಸಿರು ಒಂದು ಶ್ರೀ " ಏಕೆಂದರೆ ಈ ಪಂಚೇಂದ್ರಿಯಗಳು ಶಿರಸ್ಸನ್ನು ಆಶ್ರಯಿಸಿಕೊಂಡಿರುವ ಇಂದ್ರಿಯಗಳು ಅದ್ದರಿಂದ "ಶ್ರೀ" .
ಮನುಷ್ಯ ಅರಿವಿನ ಸಂಪತ್ತನ್ನು ಗಳಿಸುವುದೇ ಕಣ್ಣು- ಕಿವಿಯಿಂದ ; ಕಣ್ಣು-ಕಿವಿ ದೇಹದ ಸೂರ್ಯ-ಚಂದ್ರ ಇದ್ದಂತೆ. ಅಗ್ನಿ ಸ್ವರೂಪವಾಗಿರುವ ಬಾಯಿ (ಮಾತು)- ಮನುಷ್ಯನಿಗೆ ಭಗವಂತ ಕೊಟ್ಟಿರುವ ಅಪೂರ್ವವಾದ ಸಂಪತ್ತು. ಮಾತು ಹೊರಡಬೇಕಿದ್ದರೆ, ನೋಡಿದ್ದನ್ನ ಅನುಭವಿಸಲಿಕ್ಕೆ , ಕೇಳಿದ್ದನ್ನ ಗ್ರಹಿಸಲು ಅತ್ಯಂತ ಮುಖ್ಯವಾಗಿ ಮನಸ್ಸು ಬೇಕು. ಈ ಎಲ್ಲಾ ಇಂದ್ರಿಯಗಳನ್ನೂ ಚಾಲನೆಯಲ್ಲಿಡಲು ಪ್ರಾಣಶಕ್ತಿ ಬೇಕು. ಅದ್ದರಿಂದ ಈ ಪಂಚೇಂದ್ರಿಯಗಳು ಮನುಷ್ಯನಲ್ಲಿರುವ ಅತ್ಯಂತ ಶ್ರೀಮಂತ ಅಂಗ .೪> ಶ್ರೀಮಾನ್ ಅಂದರೆ -ಈ ಪಂಚೇಂದ್ರಿಯಗಳನ್ನು ನಮಗೆ ದಯಪಾಲಿಸಿದ ಹಾಗು, ಪಂಚೇಂದ್ರಿಯಗಳ ಒಡೆಯನಾದ, ಲಕ್ಷ್ಮೀಪತಿಯದ ಆ ಕರುಣಾಮಯೀ ಭಗವಂತ.

Wednesday, June 2, 2010

Vishnu Sahasranamam 21

ನಾರಸಿಂಹವಪುಃ

21)ನಾರಸಿಂಹವಪುಃ
೧. ನರ ಮತ್ತು ಸಿಂಹ ರೂಪದಲ್ಲಿ ಕಂಬದಿಂದ ಉದ್ಭವಿಸಿ ಹಿರಣ್ಯಕಶಿಪುವಿನ ಸಂಹಾರ ಮಾಡಿದ ಭಗವಂತನ ರೂಪ ಎನ್ನುವುದು ಮೇಲ್ನೋಟಕ್ಕೆ ಕಾಣುವ ಅರ್ಥ, ಆದರೆ ನಾರಸಿಂಹವಪುಃ ಅನ್ನುವುದಕ್ಕೆ ವಿಶಿಷ್ಟವಾದ ಇತರ ಅರ್ಥವಿದೆ. ನಾರ+ ಸಿಂಹ; ನಾರ ಅಂದರೆ->ನರರಲ್ಲಿ ತುಂಬಿರುವ ಅಜ್ಞಾನ. ಸಿಂಹ ಅಂದರೆ ->ಸಿಮ್ಮತಿ, ಅಂದರೆ ನಿವಾರಿಸುವವನು, ವ- ಅಂದರೆ ಜ್ಞಾನ; ,ಪುಃ ಅಂದರೆ ->ಕರುಣಿಸುವವನು

೨.ನಾರಸಿಂಹವಪುಃ ಅಂದರೆ ನರರಲ್ಲಿ ತುಂಬಿರುವ ಅಜ್ಞಾನವನ್ನು ಅಳಿಸಿ ಜ್ಞಾನದ ಬೀಜ ಬಿತ್ತುವವನು ನಾ+ಅರ =ನಾರ ; ಅರ ಅಂದರೆ ದೋಷ ;ನಾರ ಅಂದರೆ ಯಾವುದೇ ದೋಷವಿಲ್ಲದವನು ;ಸಿಂಹ ಅಂದರೆ- ಭಯಂಕರವಾಗಿ ಸರ್ವ ದೋಷವನ್ನು ನಾಶಮಾಡುವವನು.

೩.ನಾರಸಿಂಹವಪುಃ ಅಂದರೆ ಸರ್ವ ದೋಷವನ್ನು ಭಯಂಕರವಾಗಿ ನಾಶಮಾಡಿಯೂ ಕೂಡ, ಯಾವುದೇ ದೋಷವಿಲ್ಲದಿರುವವನು

೪. ಪ್ರಳಯ ಕಾಲದಲ್ಲಿ ನರವಂಶವನ್ನು ನಾಶಮಾಡಿ, ಸೃಷ್ಟಿಕಾಲದಲ್ಲಿ ಪುನಃ ಬೀಜ ಬಿತ್ತಿ ಸೃಷ್ಟಿಮಾಡುವವನು. ಹೀಗೆ ಮನುಕುಲದ ಸೃಷ್ಟಿ-ಸಂಹಾರಕ್ಕೆ ಕಾರಣವಾದವನು ನಾರಸಿಂಹವಪುಃ

೫. ಅಸುರರನ್ನು ಕೊಂದವ ನಾರಸಿಂಹವಪುಃ ... ಇತ್ಯಾದಿ ಇತ್ಯಾದಿ