Saturday, October 30, 2010

Vishnusahasranama 484-487


ವಿಷ್ಣು ಸಹಸ್ರನಾಮ:   ಅವಿಜ್ಞಾತಾ ಸಹಸ್ರಾಂಶುರ್ವಿಧಾತಾ ಕೃತಲಕ್ಷಣಃ
484) ಅವಿಜ್ಞಾತಾ
 'ಅ' ಕಾರ ವಾಚ್ಯನಾಗಿ ತನ್ನ ಸ್ವರೂಪವನ್ನು ತಾನೇ ತಿಳಿದವನು  ಅವಿಜ್ಞಾತ. ಸಮಸ್ತ ಚೇತನಾಚೇತನ ಪ್ರಪಂಚದಿಂದ ವಿಲಕ್ಷ
ನಾದ  ಭಗವಂತ ಅವಿಜ್ಞಾತ.
485) ಸಹಸ್ರಾಂಶುಃ
ಸಹಸ್ರಾರು ಕಿರ
ಗಳುಳ್ಳವನು. ಜ್ಞಾನದ ಕಿರಣಗಳಿಂದ ಜಗತ್ತಿನಲ್ಲಿ ಸನ್ನಿಹಿತನಾದ ಭಗವಂತ, ಸೂರ್ಯ ಕಿರಣದಲ್ಲಿ ಸನ್ನಿಹಿತನಾಗಿ ಜಗತ್ತಿಗೆ ಪ್ರಾಣ ಶಕ್ತಿಯನ್ನು ಹರಿಸುತ್ತಾನೆ. ಅಂಶು ಎಂದರೆ 'ಅಂಶ' . ಭಗವಂತ ಅಪರಂಪಾರವಾದ ಸಾಗರದಂತಾದರೆ ಜೀವಗಳು ಒಂದು ಹನಿಯಂತೆ. ಭಗವಂತ ಒಂದು ಬಿಂಬ ಹಾಗು ಆತನಿಗೆ ಕೋಟಿ ಕೋಟಿ ಪ್ರತಿಬಿಂಬ!
486) ವಿಧಾತಾ
ಭಗವಂತ ವಿಶಿಷ್ಟವಾದ, ವಿಲಕ್ಷಣವಾದ, ಧಾರಕ ಶಕ್ತಿ. ನಮ್ಮೊಳಗಿದ್ದು, ನಮ್ಮ ಹೊರಗಿದ್ದು, ನಮ್ಮನ್ನು ಧಾರಣೆ ಮಾಡುವ, ಪೋಷಣೆ ಮಾಡುವ; ಸಂಸಾರದಲ್ಲಿ ಮಾತ್ರವಲ್ಲದೆ ಮೋಕ್ಷದಲ್ಲೂ ರಕ್ಷಿಸುವ ದಿವ್ಯ ಶಕ್ತಿ.
 
487) ಕೃತಲಕ್ಷಣಃ
ಲಕ್ಷಣ ಎಂದರೆ ಗುರುತಿಸುವ ಸಂಗತಿ. ಆಕಾರ, ಗುಣಧರ್ಮ, ಹೆಸರು ಇತ್ಯಾದಿ ಮೂಲಭೂತ ಲಕ್ಷಣಗಳು. ಮನುಷ್ಯರೆಲ್ಲರೂ ಒಂದೇ ತರನಾಗಿದ್ದರೂ ನೂರಕ್ಕೆ ನೂರು ಸಮನಾದ ಎರಡು ವಸ್ತು ಈ ಪ್ರಪಂಚದಲ್ಲಿಲ್ಲ. ಪ್ರತಿಯೊಬ್ಬನೊಳಗೆ ಆಯ ರೂಪನಾಗಿ ಭಗವಂತ ತುಂಬಿದ್ದಾನೆ. ಪ್ರತಿಯೊಂದು ಜೀವಕ್ಕೆ ಒಂದು ಆಕಾರ ಕೊಟ್ಟ, ಆಯಾ ಆಕಾರದ ವಸ್ತುಗಳಿಗೆ ಅದರದ್ದೇ ಆದ ಗುಣಧರ್ಮವನ್ನು ಕೊಟ್ಟ. ಹೀಗಾಗಿ ಪ್ರತಿಯೊಬ್ಬರಿಗೂ ಅವನದೇ ಆದ ಸ್ವಭಾವ. ಒಬ್ಬರ ಸ್ವಭಾವದಂತೆ ಇನ್ನೊಬ್ಬರ ಸ್ವಭಾವ ಇರಲು ಸಾಧ್ಯವಿಲ್ಲ. ಹೀಗೆ ಅನಂತ ರೂಪ ಲಕ್ಷಣವನ್ನು ಹೊಂದಿದ ಭಗವಂತ 
ಕೃತಲಕ್ಷಣಃ

No comments:

Post a Comment