Monday, September 6, 2010
Vishnu Sahasranama 324-325
ಅಪಾಂ ನಿಧಿರಧಿಷ್ಠಾನಮಪ್ರಮತ್ತಃ.......
324) ಅಪಾಂನಿಧಿಃ
ಅಪಾಂನಿಧಿಃ ಎಂದರೆ "ನೀರಿನ ನೆಲೆ". ನೀರಿನ ನೆಲೆಯಾದ ಕಡಲಿನಲ್ಲಿ, ಕಡಲಿನ ದೇವತೆಯಾದ ವರುಣನಲ್ಲಿ, ಸಮಸ್ತ ಜಲರಾಶಿಯಲ್ಲಿ ಸನ್ನಿಹಿತನಾದ ಭಗವಂತ ಅಪಾಂನಿಧಿಃ. 'ಆಪ್' ಎಂದರೆ ಪಾನ ಮಾಡುವ ವಸ್ತು. ನಾವು ಬದುಕುವುದಕ್ಕೊಸ್ಕರ ಪಾನ ಮಾಡುವ ವಸ್ತು 'ನೀರು'. ಜ್ಞಾನಿಗಳು ಸದಾ ಪಾನ(ಶ್ರವಣ) ಮಾಡುವ ವಸ್ತು ಭಗವಂತನ 'ಅನಂತ ಗುಣ'. ಅನಂತ ಗುಣಗಳ ನೆಲೆ ಭಗವಂತನೋಬ್ಬನೆ. ಇನ್ನು ನಾವು ಮಾಡುವ ಸತ್ಕರ್ಮ ಕೊನೆಗೆ ಸೇರುವುದು ಭಗವಂತನನ್ನು. ಇದಕ್ಕಾಗಿ ಪ್ರತೀ ಪೂಜೆಯ ಕೊನೆಗೆ "ಕೃಷ್ಣಾರ್ಪಣ ಮಸ್ತು" ಎನ್ನುತ್ತೇವೆ. ಆದ್ದರಿಂದ ಸರ್ವ ಸತ್ಕರ್ಮಗಳ ನೆಲೆ ಭಗವಂತ. ಹೀಗೆ ಕರ್ಮಗಳ, ಗುಣಗಳ, ದೇವತೆಗಳ ಹಾಗೂ ನೀರಿನ ನೆಲೆಯಾದ ಭಗವಂತ ಅಪಾಂನಿಧಿಃ.
325) ಅಧಿಷ್ಟಾನಮ್
ಅಧಿಷ್ಟಾನಮ್ ಎಂದರೆ ಎಲ್ಲವುದಕ್ಕೂ ಆಧಾರ. ಪ್ರತಿಯೊಂದು ವಸ್ತುವಿನ ಮೂಲಾಧಾರ ಭಗವಂತ. ಭೂಮಿಯನ್ನು "ಶೇಷ" ಹೊತ್ತಿದ್ದಾನೆ. ಶೇಷನನ್ನು "ವಾಯು" ಹೊತ್ತಿದ್ದಾನೆ, ವಾಯುವಿಗೆ ಪೂರ್ಣಾಧಾರ ಭಗವಂತ. ಹೀಗೆ ಎಲ್ಲ ವಿಶ್ವಕ್ಕು ಆಧಾರವಾದ, ಎಲ್ಲಕ್ಕೂ ಅಧಿಕವಾದ ಸ್ಥಾನದಲ್ಲಿರುವ ಭಗವಂತ ಅಧಿಷ್ಟಾನಮ್.
Sunday, September 5, 2010
Vishnu sahasranama 321-323
ವಿಷ್ಣು ಸಹಸ್ರನಾಮ: ಪ್ರಾಣಃ ಪ್ರಾಣದೋ ವಾಸವಾನುಜಃ
321) ಪ್ರಾಣಃ
ಭಗವಂತ 'ಸರ್ವಪ್ರೇರಕ' ಶಕ್ತಿ. ಎಲ್ಲರ ಒಳಗಿದ್ದು ಎಲ್ಲರನ್ನೂ ಪ್ರೇರಣೆಮಾಡುವ, ಎಲ್ಲ ಚಲನೆಯನ್ನು ನಿಯಂತ್ರಿಸುವ ಶಕ್ತಿ. ಈ ಜಗತ್ತಿಗೆ ಮೊದಲು ಚಲನೆಯನ್ನು ಕೊಟ್ಟವ ಭಗವಂತ. ಈ ಹಿಂದೆ ಹೇಳಿದಂತೆ 'ಣ' ಎಂದರೆ ಭಲ ಹಾಗೂ ಆನಂದ ಎನ್ನುವ ಅರ್ಥವನ್ನು ಕೊಡುತ್ತದೆ. ಪರಿಪೂರ್ಣವಾದ ಆನಂದ ಹಾಗೂ ಭಲ ಸ್ವರೂಪ ಭಗವಂತ ಪ್ರಾಣಃ.
322) ಪ್ರಾಣದಃ
ಪ್ರಾಣದಃ ಎಂದರೆ ಪ್ರಾಣವನ್ನು ಕೊಡುವವ. ಜಗತ್ತಿನ ನಿಯಾಮಕ ಶಕ್ತಿಯಾದ ಪ್ರಾಣನನ್ನು ನಮಗೆ ಕೊಟ್ಟವ. ಪ್ರಾಣನಿಗೆ ಉಪನಿಷತ್ತಿನಲ್ಲಿ 'ಪ್ರಾತಃ' ಎಂದಿದ್ದಾರೆ. ಅಂದರೆ ಭಗವಂತನ ಗುಣವನ್ನು ಬಿತ್ತರಿಸುವ ಶಕ್ತಿ. ಇಂತಹ ಜಗದ್ಗುರುವನ್ನು ಜಗತ್ತಿಗೆ ಕೊಟ್ಟ ಭಗವಂತ ಪ್ರಾಣದಃ.
323) ವಾಸವಾನುಜಃ
ವಾಸವಾನುಜಃ ಎಂದರೆ ಇಂದ್ರನ ತಮ್ಮ ಎನ್ನುವುದು ಮೇಲ್ನೋಟಕ್ಕೆ ಕಾಣುವ ಅರ್ಥ. ಇಲ್ಲಿ ‘ವಾಸವ’ ಎಂದರೆ ವಸುಗಳ ಸಮುದಾಯ. ವಸುಗಳೆಂದರೆ ಅಷ್ಟವಸುಗಳಲ್ಲ "ದೇವತೆಗಳ ಸಮುದಾಯ". ಬ್ರಹ್ಮಾಂಡದಲ್ಲಿದ್ದು ಬ್ರಹ್ಮಾಂಡವನ್ನು, ಪಿಂಡಾಂಡದಲ್ಲಿದ್ದು ಪಿಂಡಾಂಡವನ್ನು ನಿಯಂತ್ರಿಸುವ ತತ್ವಾಭಿಮಾನಿ ದೇವತೆಗಳ ನಿಯಾಮಕನಾದ ಭಗವಂತ ವಾಸವಃ. ಇಂತಹ ದೇವತೆಗಳು ಪ್ರಾರ್ಥನೆ ಮಾಡಿದಾಗ, ಪ್ರಾರ್ಥನೆಗನುಗುಣವಾಗಿ ಜ್ಞಾನಿಗಳ ಅನುಕೂಲಕ್ಕಾಗಿ ಭೂಮಿಯಲ್ಲಿ ಅವತರಿಸುವ ಭಗವಂತ ವಾಸವಾನುಜಃ.
Saturday, September 4, 2010
Sri Sainatha Stavana Manjari-Kannada
Find below very usefull Sai Stavana manjari .Click here to download pdf Copy
ಶ್ರೀ ದಾಸಗಣೂ ಕೃತ
ಶ್ರೀ ಸಾಯಿನಾಥ ಸ್ತವನ ಮಂಜರಿ