Thursday, September 9, 2010

Vishnu sahasranama 331-332


ವಿಷ್ಣು ಸಹಸ್ರನಾಮ: ವರದೋ ವಾಯುವಾಹನಃ

331) ವರದಃ
ಭಗವಂತ ವರವನ್ನು ಕೊಡುವವನು ಹಾಗೂ ಅಯೋಗ್ಯರಿಗೆ ಸಿಕ್ಕ ವರವನ್ನು ನಾಶ ಮಾಡುವವನು. ಆತ ತನ್ನ ಯೋಗ್ಯ ಭಕ್ತರಿಗೆ ಅವರು ಬಯಸಿದ ವರವನ್ನು ಕೊಡುತ್ತಾನೆ, ಹಾಗೆಯೇ ಹಿರಣ್ಯಕಶಿಪುವಂತಹ ದುಷ್ಟರು ತಮಗೆ ಸಿಕ್ಕ ವರದ ದುರುಪಯೋಗ ಮಾಡಿದಾಗ ಅವರನ್ನು ನಾಶ ಮಾಡಿ ಭಕ್ತಕೂಟಿಯ ರಕ್ಷಣೆ ಮಾಡುತ್ತಾನೆ. ಹೀಗೆ ಭಕ್ತರು ಬಯಸಿದ್ದನ್ನೀಯುವ ಭಗವಂತ ವರದಃ.
332) ವಾಯುವಾಹನಃ
ಪ್ರಾಣ ತತ್ವದ ತೇರನ್ನೇರಿದವನು ಹಾಗೂ ವಾಯುವಿನ ಸಾರಥ್ಯದಲ್ಲಿ ದೇಹದ ತೇರನ್ನೇರಿದ ಭಗವಂತ ವಾಯುವಾಹನಃ. ವಾಯುವನ್ನು ನಮ್ಮೊಳಗಿರಿಸಿ ನಮಗೆ ಬದುಕನ್ನು ಕೊಟ್ಟ ಭಗವಂತ ಸ್ವಯಂ ವಾಯುವಾಹನ. "ವಾಯು" ಎಂದರೆ ಇಡೀ ಜಗತ್ತನ್ನು ಹೆಣೆಯುವ ಶಕ್ತಿ. ಪಂಚಭೂತಗಳನ್ನು ನಿರ್ಧಿಷ್ಟವಾಗಿ ಹೆಣೆದು ನಮಗೆ ಈ ದೇಹವನ್ನು ಭಗವಂತ ಕರುಣಿಸಿದ್ದಾನೆ; ಅದೇ ರೀತಿ ಈ ಬ್ರಹ್ಮಾಂಡವನ್ನು ನಿರ್ದಿಷ್ಟವಾಗಿ ಹೆಣೆದು ಜೋಡಿಸಿಟ್ಟಿದ್ದಾನೆ. ಜ್ಞಾನದಿಂದ ತುಂಬಿದ ಶಕ್ತಿಯಾಗಿ ಇಡೀ ಜಗತ್ತನ್ನು ಧರಿಸಿದ ಭಗವಂತನಿಗೆ ವಾಯುವಾಹನವೆಂಬುದು ಅನ್ವರ್ಥನಾಮ.

No comments:

Post a Comment