Tuesday, September 7, 2010

Vishnu sahasranama 326-327

ವಿಷ್ಣು ಸಹಸ್ರನಾಮ: ಅಪ್ರಮತ್ತಃ ಪ್ರತಿಷ್ಠಿತಃ
326) ಅಪ್ರಮತ್ತಃ

ಅಪ್ರಮತ್ತಃ ಎಂದರೆ ಎಂದೂ ಎಚ್ಚರ ತಪ್ಪದವನು. ಭಗವಂತ ಎಂದೂ ಎಚ್ಚರ ತಪ್ಪುವುದಿಲ್ಲ, ಎಂದೂ ಪ್ರಮಾದ ಮಾಡುವುದಿಲ್ಲ. ಸದಾ ನಮ್ಮನ್ನು ಪ್ರಮಾದದಿಂದ ಪಾರುಮಾಡುವ ಭಗವಂತ ಗುಣಾತೀತ ಹಾಗೂ ಆನಂದಮಯ.
327) ಪ್ರತಿಷ್ಠಿತಃ

ಭಗವಂತ ತನ್ನಲ್ಲೇ ತಾನು ನೆಲೆನಿಂತವನು; ಎಲ್ಲವೂ ಆತನಲ್ಲಿ ಪ್ರತಿಷ್ಟಿತ. ಪ್ರತಿಯೊಂದು ಜೀವರೊಳಗೂ ಭಗವಂತ ಬಿಂಬ ರೂಪದಲ್ಲಿ ಪ್ರತಿಷ್ಟಿತ. ನಮ್ಮೊಳಗೆ ನಮ್ಮ ಅತರ್ಯಾಮಿಯಾಗಿದ್ದು, ನಮ್ಮ ಸ್ವರೂಪದೊಳಗೆ ನಮ್ಮ ಬಿಂಬರೂಪನಾಗಿ ಅತ್ಯಂತ ಸಮೀಪದಲ್ಲಿರುವವನು ಆತ. ಹೀಗೆ ಪ್ರತಿಯೊಂದು ಜೀವರೊಳಗೆ ಅಂತರ್ಯಾಮಿಯಾಗಿ ಪ್ರತಿಷ್ಟಿತನಾಗಿರುವ ಭಗವಂತ ಪ್ರತಿಷ್ಠಿತಃ

No comments:

Post a Comment