343) ಅನುಕೂಲಃ
ಭಗವಂತ ಎಂದೂ ಯಾರಿಗೂ ಪ್ರತಿಕೂಲ ಅಲ್ಲ. ನಾವು ಕೆಲವೊಮ್ಮೆ ಹೇಳುವುದಿದೆ "ಜೀವನದಲ್ಲಿ ನಾನು ಎಂದೂ ಯಾರಿಗೂ ಕೆಟ್ಟದ್ದನ್ನು ಮಾಡಿಲ್ಲ, ಆದರೆ ಭಗವಂತ ನನಗೆ ಇಂತಹ ಕಷ್ಟ ಕೊಟ್ಟ; ಅವನು ಅನುಗ್ರಹಿಸಲಿಲ್ಲ; ಆತನನ್ನು ಪೂಜಿಸುವುದು ವ್ಯರ್ಥ.." ಇತ್ಯಾದಿ. ಆದರೆ ನಮಗೆ ಪ್ರತಿಕೂಲ ದೇವರಲ್ಲ, ನಾವು ನಮ್ಮ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮ! ವೇದದಲ್ಲಿ ಭಗವಂತನನ್ನು "ಅಗ್ನಿಮೀಳೇ ಪುರೋಹಿತಂ" ಎನ್ನುತ್ತಾರೆ. ಇಲ್ಲಿ ಪುರೋಹಿತಂ ಎಂದರೆ ಮೊದಲೇ ನಮ್ಮ ಹಿತದ ದಾರಿಯನ್ನು ತಿಳಿದು, ಅದಕ್ಕೆ ತಕ್ಕಂತೆ ನಮ್ಮನ್ನು ನಡೆಸುವ ಶಕ್ತಿ. ಭಗವಂತನಿಗೆ ಯಾರಮೇಲೂ ದ್ವೇಷವಿಲ್ಲ,ಅವರವರ ಜೀವ ಸ್ವರೂಪಕ್ಕೆ ಸಂಬಂಧಪಟ್ಟ ಯೋಗ್ಯತೆ ಏನಿದೆ ಅದಕ್ಕೆ ತಕ್ಕಂತೆ ಕ್ರಿಯೆ ಏನಾಗುತ್ತದೋ ಅದನ್ನು ಮಾಡಿಸುತ್ತಾನೆ. ಎಷ್ಟೋ ಸಲ ನಮಗೆ ಜೀವನದಲ್ಲಿ ಕಷ್ಟಬಂದಾಗ, ಹಿಡಿದ ಕಾರ್ಯ ವಿಫಲವಾದಾಗ, "ಭಗವಂತ ನಮಗೆ ಕೆಟ್ಟದ್ದನ್ನು ಮಾಡಿದ" ಎಂದುಕೊಳ್ಳುತ್ತೇವೆ. ಆದರೆ ನಮ್ಮ ಕಷ್ಟದ ಹಿಂದೆ ನಮ್ಮ ಉದ್ದಾರದ ಬೀಜವಿರುತ್ತದೆ ಎನ್ನುವ ವಿಷಯ ನಮಗೆ ತಿಳಿದಿರುವುದಿಲ್ಲ. ಶಾಲೆಯಲ್ಲಿ ಅದ್ಯಾಪಕರು ವಿದ್ಯಾರ್ಥಿಗೆ ಕೊಡುವ ಶಿಕ್ಷೆ, ತಂದೆ ತಾಯಿ ಮಗುವಿಗೆ ಕೊಡುವ ಶಿಕ್ಷೆ- ಮಗುವಿನ ಉದ್ದಾರಕ್ಕೆ ಹೊರತು ಇನ್ಯಾವುದೋ ದ್ವೇಷದಿಂದಲ್ಲ. ಭಗವಂತ ಕೊಡುವ ಕಷ್ಟದಲ್ಲಿ ನಮ್ಮನ್ನು ತಿದ್ದುವ ಕಾರುಣ್ಯವಿದೆ ಹಾಗು ನಮ್ಮ ಉದ್ದಾರದ ರಹಸ್ಯ ಅಡಗಿದೆ. ಅವನು ಎಂದೂ ಪ್ರತಿಕೂಲ ಅಲ್ಲ, ಆತ ಎಂದೆಂದೂ ಎಲ್ಲರಿಗೂ ಅನುಕೂಲ.
ಭಗವಂತ ಎಂದೂ ಯಾರಿಗೂ ಪ್ರತಿಕೂಲ ಅಲ್ಲ. ನಾವು ಕೆಲವೊಮ್ಮೆ ಹೇಳುವುದಿದೆ "ಜೀವನದಲ್ಲಿ ನಾನು ಎಂದೂ ಯಾರಿಗೂ ಕೆಟ್ಟದ್ದನ್ನು ಮಾಡಿಲ್ಲ, ಆದರೆ ಭಗವಂತ ನನಗೆ ಇಂತಹ ಕಷ್ಟ ಕೊಟ್ಟ; ಅವನು ಅನುಗ್ರಹಿಸಲಿಲ್ಲ; ಆತನನ್ನು ಪೂಜಿಸುವುದು ವ್ಯರ್ಥ.." ಇತ್ಯಾದಿ. ಆದರೆ ನಮಗೆ ಪ್ರತಿಕೂಲ ದೇವರಲ್ಲ, ನಾವು ನಮ್ಮ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮ! ವೇದದಲ್ಲಿ ಭಗವಂತನನ್ನು "ಅಗ್ನಿಮೀಳೇ ಪುರೋಹಿತಂ" ಎನ್ನುತ್ತಾರೆ. ಇಲ್ಲಿ ಪುರೋಹಿತಂ ಎಂದರೆ ಮೊದಲೇ ನಮ್ಮ ಹಿತದ ದಾರಿಯನ್ನು ತಿಳಿದು, ಅದಕ್ಕೆ ತಕ್ಕಂತೆ ನಮ್ಮನ್ನು ನಡೆಸುವ ಶಕ್ತಿ. ಭಗವಂತನಿಗೆ ಯಾರಮೇಲೂ ದ್ವೇಷವಿಲ್ಲ,ಅವರವರ ಜೀವ ಸ್ವರೂಪಕ್ಕೆ ಸಂಬಂಧಪಟ್ಟ ಯೋಗ್ಯತೆ ಏನಿದೆ ಅದಕ್ಕೆ ತಕ್ಕಂತೆ ಕ್ರಿಯೆ ಏನಾಗುತ್ತದೋ ಅದನ್ನು ಮಾಡಿಸುತ್ತಾನೆ. ಎಷ್ಟೋ ಸಲ ನಮಗೆ ಜೀವನದಲ್ಲಿ ಕಷ್ಟಬಂದಾಗ, ಹಿಡಿದ ಕಾರ್ಯ ವಿಫಲವಾದಾಗ, "ಭಗವಂತ ನಮಗೆ ಕೆಟ್ಟದ್ದನ್ನು ಮಾಡಿದ" ಎಂದುಕೊಳ್ಳುತ್ತೇವೆ. ಆದರೆ ನಮ್ಮ ಕಷ್ಟದ ಹಿಂದೆ ನಮ್ಮ ಉದ್ದಾರದ ಬೀಜವಿರುತ್ತದೆ ಎನ್ನುವ ವಿಷಯ ನಮಗೆ ತಿಳಿದಿರುವುದಿಲ್ಲ. ಶಾಲೆಯಲ್ಲಿ ಅದ್ಯಾಪಕರು ವಿದ್ಯಾರ್ಥಿಗೆ ಕೊಡುವ ಶಿಕ್ಷೆ, ತಂದೆ ತಾಯಿ ಮಗುವಿಗೆ ಕೊಡುವ ಶಿಕ್ಷೆ- ಮಗುವಿನ ಉದ್ದಾರಕ್ಕೆ ಹೊರತು ಇನ್ಯಾವುದೋ ದ್ವೇಷದಿಂದಲ್ಲ. ಭಗವಂತ ಕೊಡುವ ಕಷ್ಟದಲ್ಲಿ ನಮ್ಮನ್ನು ತಿದ್ದುವ ಕಾರುಣ್ಯವಿದೆ ಹಾಗು ನಮ್ಮ ಉದ್ದಾರದ ರಹಸ್ಯ ಅಡಗಿದೆ. ಅವನು ಎಂದೂ ಪ್ರತಿಕೂಲ ಅಲ್ಲ, ಆತ ಎಂದೆಂದೂ ಎಲ್ಲರಿಗೂ ಅನುಕೂಲ.
No comments:
Post a Comment