Friday, September 24, 2010

Vishnu sahasranama 385-389


ವಿಷ್ಣು ಸಹಸ್ರನಾಮ: ವ್ಯವಸಾಯೋ ವ್ಯವಸ್ಥಾನಃ ಸಂಸ್ಥಾನಃ ಸ್ಥಾನದೋ ಧ್ರುವಃ
385) ವ್ಯವಸಾಯಃ

ವ್ಯವಸಾಯ ಎಂದರೆ 'ನಿಶ್ಚಯ ಜ್ಞಾನ ಸ್ವರೂಪ'. ಭಗವಂತನನ್ನು ಬಿಟ್ಟರೆ ಬೇರೆ ಯಾರಿಗೂ ನಿಶ್ಚಯ ಜ್ಞಾನವಿಲ್ಲ. ಒಂದು ವಸ್ತುವನ್ನು ನಿಖರವಾಗಿ ತಿಳಿಯಲು ಇಡೀ ವಿಶ್ವ ರಚನೆಯ ಗಣಿತ ತಿಳಿದಿರಬೇಕು. ಎಲ್ಲವನ್ನೂ ಕರಾರುವಕ್ಕಾಗಿ ತಿಳಿದಿರುವ ಭಗವಂತ ವ್ಯವಸಾಯಃ.
386) ವ್ಯವಸ್ಥಾನಃ
ವಿವಿಧ ರೂಪಗಳಿಂದ ಪಿಂಡಾ೦ಡ ಬ್ರಹ್ಮಾಂಡಗಳಲ್ಲಿ ತುಂಬಿದವನು. ಬೇರೆ ಬೇರೆ ದೇವತೆಗಳಿಗೆ ಈ ಪಿಂಡಾ೦ಡ ಮತ್ತು ಬ್ರಹ್ಮಾಂಡದಲ್ಲಿ ಬೇರೆ ಬೇರೆ ವ್ಯವಸ್ಥೆಯಿದೆ. ದೇವತೆಗಳಿಗಲ್ಲದೆ ಪ್ರತಿಯೊಬ್ಬ ಮನುಷ್ಯನಿಗೂ ಸಹ ನಿಯಾಮಕ ವ್ಯವಸ್ಥೆ ಭಗವಂತ ಮಾಡುತ್ತಾನೆ. ಯಾರು ಏಲ್ಲಿ ಹುಟ್ಟಬೇಕು, ಏನು ಕೆಲಸ ಮಾಡಬೇಕು ಎನ್ನುವ ವ್ಯವಸ್ಥೆ ಭಗವಂತ ಮಾಡಿಯೇ ನಮ್ಮನ್ನು ಭೂಲೋಕಕ್ಕೆ ಕಳುಹಿಸುತ್ತಾನೆ . ಇಂತಹ ಭಗವಂತನಿಗೆ ವ್ಯವಸ್ಥಾನಃ ಅನ್ವರ್ಥ ನಾಮ.
387) ಸಂಸ್ಥಾನಃ
ಜ್ಞಾನಿಗಳ ಹೃದಯದಲ್ಲಿ ಚೆನ್ನಾಗಿ ನೆಲೆಸಿದವನು; ಸರ್ವ ದೇವತೆಗಳೊಳಗಿದ್ದು, ಅವರು ನಿರ್ವಹಿಸಬೇಕಾದ ಕಾರ್ಯವನ್ನು ಮಾಡಿಸುವ ಭಗವಂತ ಸಂಸ್ಥಾನಃ.
388) ಸ್ಥಾನದಃ
ಅವರವರ ಯೋಗ್ಯತೆಗೆ ತಕ್ಕಂತೆ ಅವರವರಿಗೆ ತಾಣವನ್ನು ಕೊಟ್ಟು ಸಲಹುವವನು;
389) ಧ್ರುವಃ
ಸ್ಥಿರನಾದವನು. ಭಗವಂತನೊಬ್ಬನೇ ಶಾಶ್ವತ, ಇನ್ಯಾರೂ ಶಾಶ್ವತವಲ್ಲ. ದೇವತೆಗಳ ಅವದಿ ಕೇವಲ ಒಂದು ಕಲ್ಪ ಆದರೆ ಭಗವಂತನ ಸ್ಥಾನಕ್ಕೆ ಆದಿ ಅಂತ್ಯವಿಲ್ಲ. ಜ್ಞಾನಿಗಳನ್ನು ಧ್ರುವ ಲೋಕಕ್ಕೆ ಕಳುಹಿಸುವ ಭಗವಂತ ಧ್ರುವಃ .

No comments:

Post a Comment