Saturday, August 21, 2010

Vishnu sahasranama 300

ವಿಷ್ಣು ಸಹಸ್ರನಾಮ: ಯುಗಾದಿಕೃತ್

300) ಯುಗಾದಿಕೃತ್
ಈ ಪ್ರಪಂಚ ಸೃಷ್ಟಿಯಾದಂದಿನಿಂದ ಒಂದು ಯುಗದ ಕಲ್ಪನೆಯಿದೆ. ಯುಗಗಳ ನಾಲ್ಕು ಗುಂಪು ಸೇರಿ ಯುಗಚಕ್ರವಾಗುತ್ತದೆ. ಎಲ್ಲಕ್ಕಿಂತ ಚಿಕ್ಕ ಯುಗ ಕಲಿಯುಗ. ಇದರ ಅವಧಿ ನಾಲ್ಕು ಲಕ್ಷದ ಮೂವತ್ತೆರಡು ಸಾವಿರ ವರ್ಷ. ದ್ವಾಪರ ಯುಗದ ಅವಧಿ ಕಲಿಯುಗದ ಎರಡರಷ್ಟು ಅಂದರೆ ಎಂಟು ಲಕ್ಷದ ಅರವತ್ನಾಲ್ಕು ಸಾವಿರ ವರ್ಷಗಳು. ಕಲಿಯುಗದ ಮೂರರಷ್ಟು ಅವಧಿ ತ್ರೇತಾಯುಗ ಅಂದರೆ ಹನ್ನೆರಡು ಲಕ್ಷದ ತೊಂಬತ್ತಾರು ಸಾವಿರ ವರ್ಷ. ಯುಗದ ಆದಿ ಕೃತಯುಗ, ಇದರ ಅವಧಿ ಕಲಿಯುಗದ ನಾಲ್ಕುಪಟ್ಟು ಅಂದರೆ ಹದಿನೇಳು ಲಕ್ಷದ ಇಪ್ಪತ್ತೆಂಟು ಸಾವಿರ ವರ್ಷಗಳು. ಆದ್ದರಿಂದ ಒಂದು ಯುಗಚಕ್ರದಲ್ಲಿ ನಲವತ್ಮೂರು ಲಕ್ಷದ ಇಪ್ಪತ್ತು ಸಾವಿರ ವರ್ಷಗಳಿರುತ್ತವೆ. ಇಂತಹ ಇಪ್ಪತ್ತೊಂದು ಯುಗಚಕ್ರಗಳಿಗೆ ಹದಿನೆಂಟು ಲಕ್ಷದ ಐವತ್ತು ಸಾವಿರ ವರ್ಷಗಳನ್ನು ಸೇರಿಸಿದರೆ ಒಂದು ಮನ್ವಂತರ(30,67,20,000+18,50,000). ಇಂತಹ ಹದಿನಾಲ್ಕು ಮನ್ವಂತರಗಳು ಹಾಗು ಜೊತೆಗೆ ಮನ್ವಂತರಗಳ ನಡುವಿನ ಹದಿಮೂರು ಪ್ರಳಯಕಾಲದ ಇಪ್ಪತ್ತುಸಾವಿರ ವರ್ಷಗಳು, ಒಟ್ಟಿಗೆ 432 ಕೋಟಿ (30,85,70,000x14+20,000) ವರ್ಷಗಳು. ಇದು ಚತುರ್ಮುಖನ ಒಂದು ಹಗಲು. ಆದ್ದರಿಂದ ಚತುರ್ಮುಖನ ಒಂದು ದಿನ ಅಂದರೆ 864 ಕೋಟಿ ವರ್ಷಗಳು. ಚತುರ್ಮುಖನ ಆಯಸ್ಸು 100 ವರ್ಷ ಅಂದರೆ 31 ಸಾವಿರದ 104 ಸಾವಿರ ಕೋಟಿ ವರ್ಷ (864,0000000x30x12x100=31,104,0000000000) ಈ ರೀತಿ ಕಾಲ ಚಕ್ರ ತಿರುಗುತ್ತಿರುತ್ತದೆ. ಕಲಿ ಯುಗ ಕಲಹಗಳ ಯುಗ, ಆದರೆ ತ್ರೇತಾಯುಗದಲ್ಲೂ ಕೂಡ ರಾವಣನಂತ ದುಷ್ಟ ರಾಕ್ಷಸರಿದ್ದಿದ್ದನ್ನು ಕಾಣುತ್ತೇವೆ. ಆದ್ದರಿಂದ ಭಗವಂತನ ನಿರಂತರ ಉಪಾಸನೆ ನಮ್ಮ ಬದುಕನ್ನು ಕೃತಯುಗಕ್ಕೆ ಕೊಂಡೋಯ್ಯಬಲ್ಲುದೇ ಹೊರತು ಕಾಲವಲ್ಲ. ಕಲಿಯುಗದಲ್ಲಿದ್ದು ಕೃತಯುಗದ ಆನಂದವನ್ನು ಭಗವಂತನ ನಿರಂತರ ಉಪಾಸನೆಯಿಂದ ಪಡೆಯಬಹುದು. ಇದು ಭಗವಂತನ ' ಯುಗಾದಿಕೃತ್' ನಾಮ ಉಪಾಸನೆಯ ತಾತ್ಪರ್ಯ.

1 comment:

  1. Remain in Bliss in this world, fearless, pure in heart...Wake up in Bliss every morning... carryout all your duties in Bliss....
    Lord Krishna will Bless and keep Blessing...

    ReplyDelete