Sunday, August 15, 2010

Vishnu Sahasranama 276-278


ವಿಷ್ಣು ಸಹಸ್ರನಾಮ: ಓಜಸ್ತೇಜೋದ್ಯುತಿಧರಃ ಪ್ರಕಾಶಾತ್ಮಾ ಪ್ರತಾಪನಃ
276) ಓಜಸ್ತೇಜೋದ್ಯುತಿಧರಃ

ಆತ್ಮಭಲ, ಪರಾಕ್ರಮ ಹಾಗು ಕಾಂತಿಗಳಿಗಾಸರೆಯಾದ ಭಗವಂತ ಓಜಸ್ತೇಜೋದ್ಯುತಿಧರಃ
277) ಪ್ರಕಾಶಾತ್ಮಾ
ಭಗವಂತ ಪ್ರಕಾಶ ಸ್ವರೂಪ; ಪರಿಶುದ್ಧವಾದ ಜ್ಞಾನದ ಬೆಳಕು ನೀಡುವವ. ಗೀತೆಯಲ್ಲಿ ಹೇಳುವಂತೆ:

ಜ್ಞಾನೇನ ತು ತದಜ್ಞಾನಂ ಯೇಷಾಂ ನಾಶಿತಮಾತ್ಮನಃ
ತೇಷಾಮಾದಿತ್ಯವಜ್ ಜ್ಞಾನಂ ಪ್ರಕಾಶಯತಿ ತತ್ ಪರಮ್ (ಅ-೫, ಶ್ಲೋ-೧೬)

ಅಂದರೆ ಭಗವಂತನ ಅರಿವಿನಿಂದ ಅವಿಧ್ಯೆಯನ್ನು ಅಳಿಸಿಕೊಂಡವರ ಆ 'ಅರಿವು' ಸೂರ್ಯನಂತೆ ಪರತತ್ತ್ವವನ್ನು ಬೆಳಗಿಸುತ್ತದೆ. ಹೀಗೆ ಪ್ರಕಾಶ ಸ್ವರೂಪನಾದ ಭಗವಂತ ಪ್ರಕಾಶಾತ್ಮಾ.
278) ಪ್ರತಾಪನಃ
ಶತ್ರುಗಳನ್ನು ಸದೆಬಡಿಯುವ ಪ್ರತಾಪಶಾಲಿ ;ಬೆಂಕಿಯೊಳಗಿರುವವ, ಸೂರ್ಯನೋಳಗಿರುವ ಭಗವಂತ ಪ್ರತಾಪನಃ. ಅರ್ಜುನನಿಗೆ ವಿಶ್ವರೂಪ ದರ್ಶನದಲ್ಲಿ ಭಗವಂತ ಕಾಣಿಸಿದ್ದು ಹೀಗೆ:

ಲೇಲಿ ಹೈಸೇ ಗ್ರಸಮಾನಃ ಸಮಂತಾತ್ ಲೋಕಾನ್ ಸಮಗ್ರಾನ್ ವದನೈರ್ಜ್ವಲದ್ಭಿ:
ತೇಜೋಭಿರಾಪೂರ್ಯ ಜಗತ್ ಸಮಗ್ರಂ ಭಾಸಸ್ತವೋಗ್ರಾ: ಪ್ರತಪಂತಿ ವಿಷ್ಣೋ (ಅ-೧೧,ಶ್ಲೋ-೩೦)

ಎಲ್ಲೆಲ್ಲೂ ತುಂಬಿರುವ, ಬೆಂಕಿ ಕಾರುವ ಬಾಯಿಗಳಿಂದ ಎಲ್ಲಾ ಲೋಕಗಳನ್ನು ಎಲ್ಲೆಡೆಯು ನುಂಗಿ ನೋಣೆಯುತ್ತಿರುವ, ವಿಶ್ವವನ್ನು ಕೋರೈಸಿ ಸುಡುವ ಮೈಯ ಹೊಳಪುಳ್ಳ ಭಗವಂತ. ಇದು ಭಗವಂತನ ದುಷ್ಟ ನಿಗ್ರಹ ರೂಪ. ಇಂತಹ ಭಗವಂತ ಪ್ರತಾಪನಃ.

No comments:

Post a Comment