Thursday, July 8, 2010

Vishnu Sahasranama 141


Vishnu Sahasranama : ಭ್ರಾಜಿಷ್ಣು

141)ಭ್ರಾಜಿಷ್ಣು
ಭ್ರಾಜಿಷ್ಣು ಅಂದರೆ ಬೆಳಕಿನ ಪುಂಜವಾಗಿ ಪ್ರಕಾಶಿಸುವವನು ಎಂದರ್ಥ.
ಗೀತೆಯಲ್ಲಿ ಕೃಷ್ಣ ಹೇಳುವಂತೆ ,
ಆದಿತ್ಯಾನಾಮಹಂ ವಿಷ್ಣುರ್ಜ್ಯೋತಿಷಾಂ ರವಿರಂಶುಮಾನ್ ।
ಮರೀಚಿರ್ಮರುತಾಮಸ್ಮಿ ನಕ್ಷತ್ರಾಣಾಮಹಂ ಶಶೀ (ಅ-೧೦, ಶ್ಲೋ-೨೧)
ಅಂದರೆ ರವಿಯಲ್ಲಿ ರವಿಯಾಗಿ ಪ್ರತೀ ಕಿರಣದಲ್ಲಿ ನಾನಿದ್ದೇನೆ ಎಂದರ್ಥ.
ಇನ್ನು ಈ ಪದವನ್ನು ಒಡೆದರೆ ಭ್ರಾ+ವಿಷ್ಣು, ಇಲ್ಲಿ 'ಭ್ರಾ' ಅಂದರೆ 'ಭರಣ'. ಆದ್ದರಿಂದ ಭ್ರಾಜಿಷ್ಣು ಅಂದರೆ ಎಲ್ಲವನ್ನೂ ಧರಿಸಿದವನು,
ಇನ್ನೂ ಈ ಪದವನ್ನು ಮುಂದಕ್ಕೆ ಒಡೆದರೆ, ಭ+ಆಜಿ+ಷ್ಣು. ಇಲ್ಲಿ ಆಜಿ ಅಂದರೆ ಯುದ್ದ, ಭ ಅಂದರೆ ಗೆಲ್ಲುವಂತೆ ಮಾಡುವವನು, ಷ್ಣು ಅಂದರೆ ಎಲ್ಲರ ಒಳಗೆ ನಿಂತು ಪ್ರೇರಣೆ ಮಾಡುವವ. ಆದ್ದರಿಂದ ಭ್ರಾಜಿಷ್ಣು ಅಂದರೆ , ನಾವು ನಮ್ಮ ಒಳಗೇ ಇರುವ ವೈರಿಗಳಾದ ಕಾಮ, ಕ್ರೋಧ, ಮದ, ಮತ್ಸರ, ಇತ್ಯಾದಿ ವೈರಿಗಳ ವಿರುದ್ದ ಹೋರಾಟದಲ್ಲಿ ನಮಗೆ ಗೆಲುವನ್ನು ತಂದು ಕೊಡುವವನು. ಇದು ನಮಗೆ ಭಗವಂತ ಕೊಡುವ ಶಿಕ್ಷಣ. ದೇವತೆಗಳು ನಮ್ಮನ್ನು ಪರೀಕ್ಷೆಗೆ ಒಡ್ಡಿ ನಮಗೆ ಶಿಕ್ಷಣ ಕೊಡುತ್ತಾರೆ. ಇಂತಹ ಪರೀಕ್ಷೆಯಲ್ಲಿ ನಾವು ಉತ್ತೀರ್ಣರಾಗಿ ಹೊರಬರಲು ಭಗವಂತ ನಮಗೆ ಸದಾ ಸಹಕಾರವನ್ನು ಕೊಡುತ್ತಾನೆ. ಆದ್ದರಿಂದ ಇದು ಶಿಕ್ಷೆ ಅಲ್ಲ ಶಿಕ್ಷಣ. ಇಂತಹ ಭಗವಂತ ಭ್ರಾಜಿಷ್ಣು

No comments:

Post a Comment