ವಿಷ್ಣು ಸಹಸ್ರನಾಮ: ನ್ಯಾಯೋ ನೇತಾ ಸಮೀರಣಃ
222) ನ್ಯಾಯಃ
ನಿ+ಆಯ-ನ್ಯಾಯ. ಆಯವ್ಯಯ ಅನ್ನುವ ಪದ ಎಲ್ಲರಿಗೂ ತಿಳಿದ ಸಾಮಾನ್ಯ ಪದ. ಇಲ್ಲಿ ಆಯ ಎಂದರೆ ಲಾಭ. ಎಲ್ಲಾ ನೀತಿಗಳ ಮೂಲ ಪ್ರವರ್ತಕನಾದ ಭಗವಂತ ಭಕ್ತರ ದೊಡ್ಡ ಲಾಭ ಆದ್ದರಿಂದ ಆತ ನ್ಯಾಯಃ.
223) ನೇತಾ
ನೇತಾ ಎಂದರೆ ನೇತಾರ ಅಥವಾ ನಾಯಕ. ಸಮಸ್ತ ಚರಾಚರಾತ್ಮಕ ಪ್ರಪಂಚದ, ಬ್ರಹ್ಮಾದಿ ದೇವತೆಗಳ, ಇಂದ್ರಿಯಗಳ, ಪಂಚಭೂತಗಳ ಮತ್ತು ಪಂಚಭೂತಾತ್ಮಕ ಪ್ರಪಂಚದ ನಾಯಕನಾದ ಭಗವಂತ ನೇತಾ. ಅನೇಕ ಅವತಾರಗಳ ಮೂಲಕ ನೇತಾರನಾಗಿ ಭೂಮಿಯನ್ನು ಹಾಗು ನಮ್ಮನ್ನು ರಕ್ಷಿಸಿದ ಭಗವಂತ ನೇತಾ.
224) ಸಮೀರಣಃ
ಈರಣ ಎಂದರೆ ಪ್ರೇರಣೆಮಾಡುವವನು. ನಮ್ಮೊಳಗೆ ಅನೇಕ ಅಸುರ ಶಕ್ತಿಗಳು ಹಾಗು ದೇವತಾ ಶಕ್ತಿಗಳು ಪ್ರೇರಣೆ ಮಾಡುತ್ತಿರುತ್ತವೆ. ನಾವು ಈ ಶಕ್ತಿಗಳ ಪ್ರೇರಣೆಗೊಳಗಾಗುತ್ತೇವೆ. ಆದರೆ ಈ ಎಲ್ಲಾ ಶಕ್ತಿಗಳನ್ನು ನಿಯಂತ್ರಿಸುವ ಒಬ್ಬ ಸಮೀರಣ ನಮ್ಮಲ್ಲಿದ್ದಾನೆ. "ಧಿಯೋ ಯೋನಃ ಪ್ರಚೋದಯಾತ್" ಅಂದರೆ ಯಾವ ಭಗವಂತ ಮನೋತತ್ವಗಳನ್ನು ಪ್ರೇರಣೆ ಮಾಡುತ್ತಾನೋ ಅವನು ನಮ್ಮನ್ನು ಒಳ್ಳೆಯ ದಾರಿಯತ್ತ ಪ್ರೇರೇಪಿಸಲಿ ಎಂದರ್ಥ.
No comments:
Post a Comment